<p>ಚಿತ್ರದುರ್ಗ: ‘ಸೂಕ್ಷ್ಮ ನೆಲೆ ಇರುವ ಬರಹಗಾರರು ಮಾತ್ರ ಶೋಷಣೆ, ಹಸಿವು, ಬಡತನ, ನೋವು, ಅಸಮಾನತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಓದುಗರನ್ನು ತಲುಪಲು ಪ್ರಯತ್ನಿಸುತ್ತಾರೆ’ ಎಂದು ಚಳ್ಳಕೆರೆಯ ಎಚ್ಪಿಪಿಸಿ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಡಿ. ಅಂಜಿನಪ್ಪ ಹೇಳಿದರು.</p>.<p>ಸರಸ್ವತಿ ಕಾನೂನು ಕಾಲೇಜು, ಮುಕ್ತ ವೇದಿಕೆಯಿಂದ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ನಾಲ್ಕು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಜಿ.ಎಸ್. ಉಜ್ಜನಪ್ಪ ಅವರ ‘ಗೌನಳ್ಳಿ ಎಂಬ ಗ್ರಾಮ ಭಾರತ’ ಮತ್ತು ‘ನೆನಪೆಂಬ ನಿಧಿ’ ಪುಸ್ತಕಗಳ ಕುರಿತು ಮಾತನಾಡಿದರು.</p>.<p>‘ಹಿರಿಯೂರು ಸೀಮೆಯ ದೇಸಿಯ ಸೊಗಡನ್ನು ಕಟ್ಟಿಕೊಡುವ ಪ್ರಯತ್ನ ಈ ಎರಡು ಕೃತಿಗಳಲ್ಲಿ ಅಡಗಿದೆ. ಗೌನಹಳ್ಳಿ ಮೂಲಕವೇ ಲೋಕವನ್ನು ನೋಡುವ, ಅದರೊಳಗಿನ ನೈಜ ಚಿತ್ರಣವನ್ನು ಪರಿಚಯಿಸುವ ಸೃಜನಶೀಲತೆಯನ್ನು ಕೃತಿಕಾರ ಕರಗತ ಮಾಡಿಕೊಂಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>‘ದೇಶದ ಎಲ್ಲ ಗ್ರಾಮಗಳು ನೋಡಲು ಒಂದೇ ರೀತಿ ಕಂಡರೂ ಅದರೊಳಗೆ ಪ್ರವೇಶಿಸುತ್ತಿದ್ದಂತೆ ಬೆಂಕಿಯ ಉಂಡೆಗಳು ಅಸಮಾನತೆಯ ರೂಪದಲ್ಲಿ ಕಾಣಿಸುತ್ತವೆ. ಮೇಲ್ನೋಟಕ್ಕೆ ಜಾತ್ಯತೀತವಾಗಿ ಬದುಕುತ್ತಿದ್ದರು ಬಡವ–ಬಲ್ಲಿದರ ಮಧ್ಯೆ ಸಾಕಷ್ಟು ಅಂತರ ಈಗಲೂ ಮುಂದುವರೆದಿದೆ. ಇವುಗಳನ್ನು ಘಟನೆಗಳ ಮೂಲಕ ಕಟ್ಟಿಕೊಡುವಲ್ಲಿ ಕೃತಿಗಾರರು ಸಫಲರಾಗಿದ್ದಾರೆ’ ಎಂದರು.</p>.<p>‘ದುಡ್ಡು ಸೇರಿ ಇತರೆ ಯಾವುದೇ ರೀತಿಯ ಉಪಕಾರ ಮಾಡದಿದ್ದರೂ ಪರವಾಗಿಲ್ಲ. ಇತರರ ನೋವು, ಸಮಸ್ಯೆಗೆ ಸ್ಪಂದಿಸುವ ಮತ್ತು ಉತ್ತಮ ಮಾತುಗಳೊಂದಿಗೆ ಧೈರ್ಯ ತುಂಬುವ ಮಾನವೀಯತೆ, ಭಾವನಾತ್ಮಕತೆ ಬೆಳೆಸಿಕೊಳ್ಳಿ ಎಂಬುದು ಈ ಕೃತಿಗಳ ಮೂಲ ಕೇಂದ್ರವಾಗಿವೆ. ಸಕಲ ಜೀವಿಗಳನ್ನು ಪ್ರೀತಿಸುವ ಕರುಳಿನ ಬಳ್ಳಿಯಂತೆ ಹೊರಹೊಮ್ಮಿರುವ ಒಂದೊಂದು ಕಥೆಗಳು ಘಟನಾತ್ಮಕ ಲೇಖನಗಳಾಗಿ ಹೊರಹೊಮ್ಮಿವೆ’ ಎಂದು ಬಣ್ಣಿಸಿದರು.</p>.<p class="Subhead">‘ವೈಯಕ್ತಿಕ ಹಕ್ಕು ಕಸಿದುಕೊಳ್ಳುವಂತಿಲ್ಲ’</p>.<p>‘ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯವಿದೆ. ಸಂವಿಧಾನ ಹಕ್ಕುಗಳನ್ನು ಕೂಡ ನೀಡಿದೆ. ಆದ್ದರಿಂದ ಯಾರ ವೈಯಕ್ತಿಕ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಬಾರದು’ ಎಂದು ರಾಜ್ಯಸಭಾ ಮಾಜಿ ಸದಸ್ಯ ಎಚ್. ಹನುಮಂತಪ್ಪ ಸಲಹೆ ನೀಡಿದರು.</p>.<p>‘ನೆಲ, ಜಲ, ಭಾಷೆ ಹೆಸರಿನಲ್ಲಿ ಹೋರಾಟಗಳು ನಡೆದಿವೆ. ಪ್ರಸ್ತುತ ನಡೆಯುತ್ತಲೂ ಇವೆ. ಈ ವಿಚಾರದಲ್ಲಿ ನ್ಯಾಯಯುತ, ಕಾನೂನಾತ್ಮಕವಾಗಿ ಹಕ್ಕು ಪಡೆಯುವುದರಲ್ಲಿ ತಪ್ಪಿಲ್ಲ. ಆದರೆ, ಬಲವಂಥದಿಂದ ಕಸಿಯುವ ಪ್ರಯತ್ನ ಸಲ್ಲದು’ ಎಂದು ಹೇಳಿದರು.</p>.<p>‘ಭಾರತ ಸ್ವಾತಂತ್ರ್ಯ ಪಡೆದು 74ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಅವಧಿಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಿವೆ. ರಾಷ್ಟ್ರದ ಸಂಪತ್ತು ಮತ್ತು ಆಸ್ತಿಯನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ’ ಎಂದರು.</p>.<p>ಇದೇ ವೇಳೆ ಡಾ. ಚನ್ನವೀರೇಗೌಡರನ್ನು ಸನ್ಮಾನಿಸಲಾಯಿತು. ಸಾಹಿತಿ ಪ್ರೊ.ಸಿ.ವಿ. ಪಾಟೀಲ ಅವರು ಡಾ.ಸಿ. ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಅವರ ‘ಒಳದನಿ’, ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ.ಆರ್. ಚಂದ್ರಶೇಖರ್ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಅವರ ‘ವರ್ತಮಾನ’ ಕೃತಿಗಳ ಕುರಿತು ಮಾತನಾಡಿದರು.</p>.<p>ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಎಸ್. ಸುಧಾದೇವಿ, ಮುಕ್ತ ವೇದಿಕೆ ಸಂಚಾಲಕ ಪ್ರೊ.ಟಿ.ಎಚ್. ಕೃಷ್ಣಮೂರ್ತಿ, ಆಕಾಶವಾಣಿಯ ಅರಕಲಗೂಡು ವಿ. ಮಧುಸೂದನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿತ್ರದುರ್ಗ: ‘ಸೂಕ್ಷ್ಮ ನೆಲೆ ಇರುವ ಬರಹಗಾರರು ಮಾತ್ರ ಶೋಷಣೆ, ಹಸಿವು, ಬಡತನ, ನೋವು, ಅಸಮಾನತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಓದುಗರನ್ನು ತಲುಪಲು ಪ್ರಯತ್ನಿಸುತ್ತಾರೆ’ ಎಂದು ಚಳ್ಳಕೆರೆಯ ಎಚ್ಪಿಪಿಸಿ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಡಿ. ಅಂಜಿನಪ್ಪ ಹೇಳಿದರು.</p>.<p>ಸರಸ್ವತಿ ಕಾನೂನು ಕಾಲೇಜು, ಮುಕ್ತ ವೇದಿಕೆಯಿಂದ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ನಾಲ್ಕು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಜಿ.ಎಸ್. ಉಜ್ಜನಪ್ಪ ಅವರ ‘ಗೌನಳ್ಳಿ ಎಂಬ ಗ್ರಾಮ ಭಾರತ’ ಮತ್ತು ‘ನೆನಪೆಂಬ ನಿಧಿ’ ಪುಸ್ತಕಗಳ ಕುರಿತು ಮಾತನಾಡಿದರು.</p>.<p>‘ಹಿರಿಯೂರು ಸೀಮೆಯ ದೇಸಿಯ ಸೊಗಡನ್ನು ಕಟ್ಟಿಕೊಡುವ ಪ್ರಯತ್ನ ಈ ಎರಡು ಕೃತಿಗಳಲ್ಲಿ ಅಡಗಿದೆ. ಗೌನಹಳ್ಳಿ ಮೂಲಕವೇ ಲೋಕವನ್ನು ನೋಡುವ, ಅದರೊಳಗಿನ ನೈಜ ಚಿತ್ರಣವನ್ನು ಪರಿಚಯಿಸುವ ಸೃಜನಶೀಲತೆಯನ್ನು ಕೃತಿಕಾರ ಕರಗತ ಮಾಡಿಕೊಂಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>‘ದೇಶದ ಎಲ್ಲ ಗ್ರಾಮಗಳು ನೋಡಲು ಒಂದೇ ರೀತಿ ಕಂಡರೂ ಅದರೊಳಗೆ ಪ್ರವೇಶಿಸುತ್ತಿದ್ದಂತೆ ಬೆಂಕಿಯ ಉಂಡೆಗಳು ಅಸಮಾನತೆಯ ರೂಪದಲ್ಲಿ ಕಾಣಿಸುತ್ತವೆ. ಮೇಲ್ನೋಟಕ್ಕೆ ಜಾತ್ಯತೀತವಾಗಿ ಬದುಕುತ್ತಿದ್ದರು ಬಡವ–ಬಲ್ಲಿದರ ಮಧ್ಯೆ ಸಾಕಷ್ಟು ಅಂತರ ಈಗಲೂ ಮುಂದುವರೆದಿದೆ. ಇವುಗಳನ್ನು ಘಟನೆಗಳ ಮೂಲಕ ಕಟ್ಟಿಕೊಡುವಲ್ಲಿ ಕೃತಿಗಾರರು ಸಫಲರಾಗಿದ್ದಾರೆ’ ಎಂದರು.</p>.<p>‘ದುಡ್ಡು ಸೇರಿ ಇತರೆ ಯಾವುದೇ ರೀತಿಯ ಉಪಕಾರ ಮಾಡದಿದ್ದರೂ ಪರವಾಗಿಲ್ಲ. ಇತರರ ನೋವು, ಸಮಸ್ಯೆಗೆ ಸ್ಪಂದಿಸುವ ಮತ್ತು ಉತ್ತಮ ಮಾತುಗಳೊಂದಿಗೆ ಧೈರ್ಯ ತುಂಬುವ ಮಾನವೀಯತೆ, ಭಾವನಾತ್ಮಕತೆ ಬೆಳೆಸಿಕೊಳ್ಳಿ ಎಂಬುದು ಈ ಕೃತಿಗಳ ಮೂಲ ಕೇಂದ್ರವಾಗಿವೆ. ಸಕಲ ಜೀವಿಗಳನ್ನು ಪ್ರೀತಿಸುವ ಕರುಳಿನ ಬಳ್ಳಿಯಂತೆ ಹೊರಹೊಮ್ಮಿರುವ ಒಂದೊಂದು ಕಥೆಗಳು ಘಟನಾತ್ಮಕ ಲೇಖನಗಳಾಗಿ ಹೊರಹೊಮ್ಮಿವೆ’ ಎಂದು ಬಣ್ಣಿಸಿದರು.</p>.<p class="Subhead">‘ವೈಯಕ್ತಿಕ ಹಕ್ಕು ಕಸಿದುಕೊಳ್ಳುವಂತಿಲ್ಲ’</p>.<p>‘ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯವಿದೆ. ಸಂವಿಧಾನ ಹಕ್ಕುಗಳನ್ನು ಕೂಡ ನೀಡಿದೆ. ಆದ್ದರಿಂದ ಯಾರ ವೈಯಕ್ತಿಕ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಬಾರದು’ ಎಂದು ರಾಜ್ಯಸಭಾ ಮಾಜಿ ಸದಸ್ಯ ಎಚ್. ಹನುಮಂತಪ್ಪ ಸಲಹೆ ನೀಡಿದರು.</p>.<p>‘ನೆಲ, ಜಲ, ಭಾಷೆ ಹೆಸರಿನಲ್ಲಿ ಹೋರಾಟಗಳು ನಡೆದಿವೆ. ಪ್ರಸ್ತುತ ನಡೆಯುತ್ತಲೂ ಇವೆ. ಈ ವಿಚಾರದಲ್ಲಿ ನ್ಯಾಯಯುತ, ಕಾನೂನಾತ್ಮಕವಾಗಿ ಹಕ್ಕು ಪಡೆಯುವುದರಲ್ಲಿ ತಪ್ಪಿಲ್ಲ. ಆದರೆ, ಬಲವಂಥದಿಂದ ಕಸಿಯುವ ಪ್ರಯತ್ನ ಸಲ್ಲದು’ ಎಂದು ಹೇಳಿದರು.</p>.<p>‘ಭಾರತ ಸ್ವಾತಂತ್ರ್ಯ ಪಡೆದು 74ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಅವಧಿಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಿವೆ. ರಾಷ್ಟ್ರದ ಸಂಪತ್ತು ಮತ್ತು ಆಸ್ತಿಯನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ’ ಎಂದರು.</p>.<p>ಇದೇ ವೇಳೆ ಡಾ. ಚನ್ನವೀರೇಗೌಡರನ್ನು ಸನ್ಮಾನಿಸಲಾಯಿತು. ಸಾಹಿತಿ ಪ್ರೊ.ಸಿ.ವಿ. ಪಾಟೀಲ ಅವರು ಡಾ.ಸಿ. ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಅವರ ‘ಒಳದನಿ’, ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ.ಆರ್. ಚಂದ್ರಶೇಖರ್ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಅವರ ‘ವರ್ತಮಾನ’ ಕೃತಿಗಳ ಕುರಿತು ಮಾತನಾಡಿದರು.</p>.<p>ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಎಸ್. ಸುಧಾದೇವಿ, ಮುಕ್ತ ವೇದಿಕೆ ಸಂಚಾಲಕ ಪ್ರೊ.ಟಿ.ಎಚ್. ಕೃಷ್ಣಮೂರ್ತಿ, ಆಕಾಶವಾಣಿಯ ಅರಕಲಗೂಡು ವಿ. ಮಧುಸೂದನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>