<p>ಪ್ರಜಾವಾಣಿ ವಾರ್ತೆ</p>.<p>ಸಿರಿಗೆರೆ: ತರಳಬಾಳು ಮಠದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೀಪಾವಳಿಯನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.</p>.<p>ಶ್ರೀಗಳು ಐಕ್ಯಮಂಟಪದಲ್ಲಿ ಶಿವಕುಮಾರ ಶ್ರೀ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಸಾಲು ದೀಪಗಳನ್ನು ಬೆಳಗಿಸಿ ದೀಪಾವಳಿಗೆ ಚಾಲನೆ ನೀಡಿದರು.</p>.<p>ಈ ಸಂದರ್ಭದಲ್ಲಿ ಗೃಹಿಣಿಯರು, ಮಕ್ಕಳು, ಯುವಕರು ಸಾವಿರಾರು ಸಂಖ್ಯೆಯಲ್ಲಿ ಮಠಕ್ಕೆ ಬಂದಿದ್ದರು. ಮಠದಲ್ಲಿ ಸಜ್ಜುಗೊಳಿಸಿದ್ದ ಸಾವಿರಾರು ಹಣತೆಗಳನ್ನು ಐಕ್ಯಮಂಟಪದಲ್ಲಿ ಸಾಲಾಗಿ ಜೋಡಿಸಲಾಗಿತ್ತು. ಮಠಕ್ಕೆ ಭೇಟಿ ನೀಡಿದ ಭಕ್ತರು ಬೆಳಗುವ ಹಣತೆಗಳನ್ನು ಪಡೆದುಕೊಂಡು ಮನೆಗಳಿಗೆ ತೆರಳಿ ಮನೆಯಲ್ಲಿನ ಪೂಜೆಗಳನ್ನು ಮುಂದುವರಿಸಿದರು.</p>.<p>‘ಇದು ಶಿವಕುಮಾರ ಶ್ರೀಗಳು ಬೆಳಗಿದ ಹಣತೆ. ಇದರಿಂದ ಮತ್ತೆ ಹತ್ತಾರು ದೀಪಗಳನ್ನು ನಾವು ಬೆಳಗಿಸುತ್ತೇವೆ. ಪ್ರತಿ ದೀಪಾವಳಿಯಂದು ಮಠಕ್ಕೆ ಬಂದು ಅಲ್ಲಿಂದ ಹಣತೆ ಪಡೆದುಕೊಂಡು ಮನೆಗೆ ತೆರಳುತ್ತೇನೆ’ ಎಂದು ಗೃಹಿಣಿ ಮಾನಸಾ ತಿಳಿಸಿದರು.</p>.<p>ಮಠಕ್ಕೆ ಬಂದ ಭಕ್ತರು ಸರತಿ ಸಾಲಲ್ಲಿ ನಿಂತು ಶ್ರೀಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ದೀಪಾವಳಿ ಆಚರಣೆಗೆಂದೇ ಮಠದ ಆವರಣವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p>ಸಿರಿಗೆರೆ: ತರಳಬಾಳು ಮಠದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೀಪಾವಳಿಯನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.</p>.<p>ಶ್ರೀಗಳು ಐಕ್ಯಮಂಟಪದಲ್ಲಿ ಶಿವಕುಮಾರ ಶ್ರೀ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಸಾಲು ದೀಪಗಳನ್ನು ಬೆಳಗಿಸಿ ದೀಪಾವಳಿಗೆ ಚಾಲನೆ ನೀಡಿದರು.</p>.<p>ಈ ಸಂದರ್ಭದಲ್ಲಿ ಗೃಹಿಣಿಯರು, ಮಕ್ಕಳು, ಯುವಕರು ಸಾವಿರಾರು ಸಂಖ್ಯೆಯಲ್ಲಿ ಮಠಕ್ಕೆ ಬಂದಿದ್ದರು. ಮಠದಲ್ಲಿ ಸಜ್ಜುಗೊಳಿಸಿದ್ದ ಸಾವಿರಾರು ಹಣತೆಗಳನ್ನು ಐಕ್ಯಮಂಟಪದಲ್ಲಿ ಸಾಲಾಗಿ ಜೋಡಿಸಲಾಗಿತ್ತು. ಮಠಕ್ಕೆ ಭೇಟಿ ನೀಡಿದ ಭಕ್ತರು ಬೆಳಗುವ ಹಣತೆಗಳನ್ನು ಪಡೆದುಕೊಂಡು ಮನೆಗಳಿಗೆ ತೆರಳಿ ಮನೆಯಲ್ಲಿನ ಪೂಜೆಗಳನ್ನು ಮುಂದುವರಿಸಿದರು.</p>.<p>‘ಇದು ಶಿವಕುಮಾರ ಶ್ರೀಗಳು ಬೆಳಗಿದ ಹಣತೆ. ಇದರಿಂದ ಮತ್ತೆ ಹತ್ತಾರು ದೀಪಗಳನ್ನು ನಾವು ಬೆಳಗಿಸುತ್ತೇವೆ. ಪ್ರತಿ ದೀಪಾವಳಿಯಂದು ಮಠಕ್ಕೆ ಬಂದು ಅಲ್ಲಿಂದ ಹಣತೆ ಪಡೆದುಕೊಂಡು ಮನೆಗೆ ತೆರಳುತ್ತೇನೆ’ ಎಂದು ಗೃಹಿಣಿ ಮಾನಸಾ ತಿಳಿಸಿದರು.</p>.<p>ಮಠಕ್ಕೆ ಬಂದ ಭಕ್ತರು ಸರತಿ ಸಾಲಲ್ಲಿ ನಿಂತು ಶ್ರೀಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ದೀಪಾವಳಿ ಆಚರಣೆಗೆಂದೇ ಮಠದ ಆವರಣವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>