ಕೋವಿಡ್ ಬರದಿಂದಾಗಿ ನಮ್ಮ ಸೊಸೈಟಿ ವಹಿವಾಟು ನಡೆಸಲು ಸಾಧ್ಯವಾಗಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಮತದಾನದ ಹಕ್ಕು ಕಿತ್ತುಕೊಳ್ಳುವುದು ಸರಿಯಲ್ಲ. ನಾವು ಕೋರ್ಟ್ಗೆ ಹೋಗುತ್ತೇವೆ ಎಂಬುದನ್ನು ಅರಿತು ಅಧಿಕಾರಿಗಳು ಕೇವಿಯಟ್ ಸಲ್ಲಿಸಿರುವುದು ಆಶ್ಚರ್ಯ ತರಿಸಿದೆ.
ಟಿ.ರಘುಮೂರ್ತಿ, ಚಳ್ಳಕೆರೆ ಶಾಸಕ
ಕಾನೂನಾತ್ಮಕವಾಗಿ ವಹಿವಾಟು ನಡೆಸದ ಸೊಸೈಟಿಗಳ ಪ್ರತಿನಿಧಿಗಳ ಮತದಾನದ ಹಕ್ಕು ರದ್ದುಗೊಳಿಸಲಾಗಿದೆ. ಇದರಲ್ಲಿ ಯಾವ ರಾಜಕೀಯ ಉದ್ದೇಶವೂ ಇಲ್ಲ.
ಇಲ್ಯಾಸ್ ಉಲ್ಲಾ ಷರೀಫ್, ಸಿಇಒ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್