<p><strong>ಹೊಸದುರ್ಗ</strong>: ತಾಲ್ಲೂಕಿನ ಗೂಳಿಹಟ್ಟಿ ಗ್ರಾಮದಲ್ಲಿ ನೆಲೆಸಿರುವ ಕರಿಯಮ್ಮ ದೇವಿಯ ರಥೋತ್ಸವ ಶನಿವಾರ ವೈಭವಯುತವಾಗಿ ನಡೆಯಿತು.</p>.<p>ಏ.8ರಂದು ವಧುವಣಿಗೆ ಶಾಸ್ತ್ರದ ಮೂಲಕ ಜಾತ್ರೆ ಆರಂಭಗೊಂಡಿತ್ತು. ಬುಧವಾರ ಧ್ವಜಾರೋಹಣ, ಹೊಳೆಪೂಜೆ, ದೊಡ್ಡಭಾನೋತ್ಸವ, ಬೇವಿನ ಸೀರೆ ಮತ್ತು ಶಾಸ್ತ್ರದಂಡ ನಡೆದವು. ಗುರುವಾರ ಸಂಜೆ ಧೂಳು ಉತ್ಸವ, ಶುಕ್ರವಾರ ಗಜೋತ್ಸವ ನಡೆಯಿತು. ನಂತರ ಎನ್.ಜಿ.ಹಳ್ಳಿ ಗ್ರಾಮದ ಮುತ್ತಿನ ಮುಡಿಯಮ್ಮ ದೇವಿ ಗ್ರಾಮಕ್ಕೆ ಆಗಮಿಸಿತು.</p>.<p>ಶನಿವಾರ ಗ್ರಾಮದಲ್ಲಿ ತೇರಿನ ಮನೆ ಹತ್ತಿರ ಹರಳೆಣ್ಣೆ ಹಚ್ಚಿ ಬೃಹತ್ ಗಾತ್ರದ ಹಗ್ಗವನ್ನು ರಥಕ್ಕೆ ಜೋಡಿಸಿದ ಬಳಿಕ ವಿವಿಧ ಬಾವುಟ ಮತ್ತು ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕಾರಗೊಳಿಸಲಾಯಿತು. ಬೃಹತ್ ಹಾರಗಳಿಂದ ತೇರಿನ ಸೊಬಗನ್ನ ಮತ್ತಷ್ಟು ಹೆಚ್ಚಿಸಲಾಯಿತು. </p>.<p>ಕರಿಯಮ್ಮ ದೇವಿ ಮತ್ತು ಮುತ್ತಿನ ಮುಡಿಯಮ್ಮ ದೇವಿಯರನ್ನು ರಥದ ಮೇಲೆ ಪ್ರತಿಷ್ಠಾಪಿಸಿ ವಿವಿಧ ವಾದ್ಯಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.</p>.<p>ಭಕ್ತರು ತೆಂಗಿನ ಕಾಯಿ, ಬಾಳೆಹಣ್ಣು, ನಾಣ್ಯ ಹಾಗೂ ಮಂಡಕ್ಕಿಯನ್ನು ತೇರಿಗೆ ಎಸೆದು ಭಕ್ತಿ ಸಮರ್ಪಿಸಿದರು. ರಥದ ಮುಂದೆ ಸೋಮನ ಕುಣಿತಕ್ಕೆ ಭಕ್ತರು ಮೈಮರೆತು ವೀಕ್ಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸದುರ್ಗ</strong>: ತಾಲ್ಲೂಕಿನ ಗೂಳಿಹಟ್ಟಿ ಗ್ರಾಮದಲ್ಲಿ ನೆಲೆಸಿರುವ ಕರಿಯಮ್ಮ ದೇವಿಯ ರಥೋತ್ಸವ ಶನಿವಾರ ವೈಭವಯುತವಾಗಿ ನಡೆಯಿತು.</p>.<p>ಏ.8ರಂದು ವಧುವಣಿಗೆ ಶಾಸ್ತ್ರದ ಮೂಲಕ ಜಾತ್ರೆ ಆರಂಭಗೊಂಡಿತ್ತು. ಬುಧವಾರ ಧ್ವಜಾರೋಹಣ, ಹೊಳೆಪೂಜೆ, ದೊಡ್ಡಭಾನೋತ್ಸವ, ಬೇವಿನ ಸೀರೆ ಮತ್ತು ಶಾಸ್ತ್ರದಂಡ ನಡೆದವು. ಗುರುವಾರ ಸಂಜೆ ಧೂಳು ಉತ್ಸವ, ಶುಕ್ರವಾರ ಗಜೋತ್ಸವ ನಡೆಯಿತು. ನಂತರ ಎನ್.ಜಿ.ಹಳ್ಳಿ ಗ್ರಾಮದ ಮುತ್ತಿನ ಮುಡಿಯಮ್ಮ ದೇವಿ ಗ್ರಾಮಕ್ಕೆ ಆಗಮಿಸಿತು.</p>.<p>ಶನಿವಾರ ಗ್ರಾಮದಲ್ಲಿ ತೇರಿನ ಮನೆ ಹತ್ತಿರ ಹರಳೆಣ್ಣೆ ಹಚ್ಚಿ ಬೃಹತ್ ಗಾತ್ರದ ಹಗ್ಗವನ್ನು ರಥಕ್ಕೆ ಜೋಡಿಸಿದ ಬಳಿಕ ವಿವಿಧ ಬಾವುಟ ಮತ್ತು ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕಾರಗೊಳಿಸಲಾಯಿತು. ಬೃಹತ್ ಹಾರಗಳಿಂದ ತೇರಿನ ಸೊಬಗನ್ನ ಮತ್ತಷ್ಟು ಹೆಚ್ಚಿಸಲಾಯಿತು. </p>.<p>ಕರಿಯಮ್ಮ ದೇವಿ ಮತ್ತು ಮುತ್ತಿನ ಮುಡಿಯಮ್ಮ ದೇವಿಯರನ್ನು ರಥದ ಮೇಲೆ ಪ್ರತಿಷ್ಠಾಪಿಸಿ ವಿವಿಧ ವಾದ್ಯಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.</p>.<p>ಭಕ್ತರು ತೆಂಗಿನ ಕಾಯಿ, ಬಾಳೆಹಣ್ಣು, ನಾಣ್ಯ ಹಾಗೂ ಮಂಡಕ್ಕಿಯನ್ನು ತೇರಿಗೆ ಎಸೆದು ಭಕ್ತಿ ಸಮರ್ಪಿಸಿದರು. ರಥದ ಮುಂದೆ ಸೋಮನ ಕುಣಿತಕ್ಕೆ ಭಕ್ತರು ಮೈಮರೆತು ವೀಕ್ಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>