ಹೊಸ ತಂತ್ರಜ್ಞಾನ ಅಳವಡಿಕೆ ಅವಶ್ಯ
‘ಇಂಗಳದಾಳು ತಾಮ್ರ ಗಣಿ ಉತ್ತುಂಗದ ಸ್ಥಿತಿಯನ್ನು ಕಂಡಿದ್ದೇನೆ. 2 ಕಿ.ಮೀ ವ್ಯಾಪ್ತಿಯ ಗಣಿ ಸುರಂಗದೊಳಗೆ ಓಡಾಡಿದ್ದೇನೆ. ಈಗಲೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪರಿಸರಕ್ಕೆ ಧಕ್ಕೆಯಾಗದಂತೆ ಗಣಿಗಾರಿಕೆ ಸಾಧ್ಯವಿದೆ. ಇದು ಸರ್ಕಾರಕ್ಕೆ ಆರ್ಥಿಕ ಶಕ್ತಿಯಾಗಲಿದೆ ಉದ್ಯೋಗಕ್ಕೂ ದಾರಿಯಾಗಲಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿವೃತ್ತ ಭೂವಿಜ್ಞಾನಿ ಜೆ.ಪರಶುರಾಮ ಅವರು ಈ ಕುರಿತು ಪ್ರತಿಕ್ರಿಯಿಸಿದರು.