‘ಬೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು, ಕಳೆದ ಒಂದೂವರೆ ವರ್ಷದ ಹಿಂದೆ ಕೆಪಿಟಿಸಿಎಲ್ಗೆ ಬಂದಿದ್ದರು. ಬೆಸ್ಕಾಂನಿಂದ ವೇತನ ಪಡೆದ ವಿವರ ನೀಡುವ ಎಲ್.ಪಿ.ಎಸ್ ಅನ್ನು ಕೆಪಿಟಿಸಿಎಲ್ಗೆ ಅವರು ಸಲ್ಲಿಸಿರಲಿಲ್ಲ ಎಂಬ ಕಾರಣಕ್ಕೆ, ಕಳೆದ 18 ತಿಂಗಳಿಂದ ಅವರಿಗೆ ವೇತನ ಪಾವತಿಯಾಗಿಲ್ಲ.ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿರಲಿಲ್ಲ. ವೇತನವಿಲ್ಲದೇ ಜೀವನ ನಡೆಸಲು ಕಷ್ಟಪಡುತ್ತಿದ್ದ ನಮ್ಮ ತಂದೆಯವರು ಸಮಸ್ಯೆಗೆ ಪರಿಹಾರ ಕಾಣದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತರ ಮಗ ರಕ್ಷಿತ್ ಆರೋಪಿಸಿದ್ದಾರೆ.