ಸತತ ಐದು ವರ್ಷಗಳಿಂದ ಜಿಲ್ಲೆ ಬರ ಪರಿಸ್ಥಿತಿ ಎದುರಿಸುತ್ತಿದೆ. ಕಳೆದ ವರ್ಷ ಶೇ 90ರಷ್ಟು ಬೆಳೆ ಒಣಗಿ ಹೋಗಿದೆ. ಆದರೂ, ಬೆಳೆ ವಿಮೆ ಪಾವತಿಸಲು ಕಂಪನಿಗಳು ಸಬೂಬು ನೀಡುತ್ತಿವೆ. ಬೆಳೆ ನಷ್ಟ ಪರಿಹಾರ ಕೂಡ ಬಿಡುಗಡೆ ಮಾಡದೇ ಸರ್ಕಾರ ರೈತರನ್ನು ವಂಚಿಸಲಾಗುತ್ತಿದೆ. ಉಸ್ತುವಾರಿ ಸಚಿವರು, ರಾಜ್ಯ ಸರ್ಕಾರದ ಗಮನ ಸೆಳೆದರೂ ಪ್ರಯೋಜವಾಗಿಲ್ಲ ಎಂದು ಆರೋಪಿಸಿದರು.