ಧರ್ಮಪುರ: ಹೋಬಳಿಯಲ್ಲಿ ದಿನೇ ದಿನೆ ಏರುತ್ತಿರುವ ಬಿಸಿಲಿನ ತಾಪದಿಂದ ಜನರು ಹೈರಾಣರಾಗಿದ್ದಾರೆ. ಕೆರೆಗಳಲ್ಲಿ ನೀರು ಖಾಲಿಯಾಗಿ ಮೀನುಗಳು ಸಾಯಲಾರಂಭಿಸಿದ್ದು, ದುರ್ನಾತ ಬೀರುತ್ತಿದೆ.
ಸಮೀಪದ ರಂಗೇನಹಳ್ಳಿ ಭಗವತಿ ಆಂಜನೇಯ ಕೆರೆಯಲ್ಲಿ ನೀರು ಖಾಲಿಯಾಗಿದೆ. ತಗ್ಗು ಪ್ರದೇಶದಲ್ಲಿ ಅಲ್ಪ ಸ್ವಲ್ಪ ನೀರಿದ್ದು, ಕೆರೆಯಲ್ಲಿ ಉಳಿದಿದ್ದ ಮೀನುಗಳು ಸಾಯಲಾರಂಭಿಸಿವೆ. ನೀರಿನ ಮೇಲೆ ಮೀನು ತೇಲಿ ದುರ್ನಾತ ಬೀರುತ್ತಿದೆ. ಮೀನು ಹಿಡಿಯುವ ಗುತ್ತಿಗೆ ಪಡೆದಿದ್ದವರು ಈಗಾಗಲೇ ಮೀನು ಹಿಡಿದು ಮಾರಾಟ ಮಾಡಿಕೊಂಡಿದ್ದಾರೆ. ಉಳಿದಿದ್ದ ಸ್ವಲ್ಪ ಮೀನುಗಳು ಸತ್ತು ನೀರಿನ ಮೇಲೆ ತೇಲಿ ದುರ್ನಾತ ಬೀರುತ್ತಿದೆ. ಮಳೆ ಬಂದು ಕೆರೆಯಲ್ಲಿ ನೀರು ಸಂಗ್ರಹವಾದರೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಚಿತ್ರಸುದ್ದಿ:ಧರ್ಮಪುರ ಹೋಬಳಿಯ ರಂಗೇನಹಳ್ಳಿಯ ಭಗವತಿ ಆಂಜನೇಯ ಕೆರೆಯಲ್ಲಿ ನೀರು ಖಾಲಿಯಾಗಿ ಮೀನುಗಳು ಸತ್ತು ದುರ್ವಾಸನೆ ಬೀರುತ್ತಿದೆ.