<p><strong>ಚಿತ್ರದುರ್ಗ</strong>: ‘ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ ನರ್ಸ್, ‘ಡಿ’ ಗ್ರೂಪ್ ನೌಕರರು ಹಾಗೂ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ದಾಖಲಾದ ಸೋಂಕಿತರು ಗುಣಮುಖರಾಗಿ ಹೊರ ಹೋಗುವವರೆಗೂ ಆತ್ಮಸ್ಥೈರ್ಯ ನೀಡಿದ್ದೇವೆ. ಆಯುಷ್ ವೈದ್ಯರು ಕರ್ತವ್ಯ ಪ್ರಜ್ಞೆ ಮೆರೆದಿದ್ದೇವೆ...’</p>.<p>‘ಕೋವಿಡ್-19’ ನಿಯಂತ್ರಣಕ್ಕೆ ಕಾರ್ಯನಿರ್ವಹಿಸುತ್ತಿರುವ ಕೋಟೆನಾಡಿನ ‘ಕೊರೊನಾ ವಾರಿಯರ್’ ಆಯುಷ್ ಇಲಾಖೆ ವೈದ್ಯ ಡಾ.ಟಿ.ಶಿವಕುಮಾರ್ ಅವರ ಮಾತಿದು. ‘ಆಯುಷ್’ ವೈದ್ಯರ ಕಾರ್ಯವೈಖರಿ ಕುರಿತು ಅವರು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.</p>.<p>‘ಮೊದಲ ದಿನ ಕೋವಿಡ್-19 ಆಸ್ಪತ್ರೆಯೊಳಗೆ ಪ್ರವೇಶಿಸಿದಾಗ ನನಗೂ ಆತಂಕ ಉಂಟಾಯಿತು. ಪವಿತ್ರವಾದ ವೈದ್ಯ ವೃತ್ತಿಯಲ್ಲಿರುವ ಕಾರಣ ಧೈರ್ಯ ತಂದುಕೊಂಡೆ. ಆನಂತರ ನಮಗೆ ಕರ್ತವ್ಯಕ್ಕೆ ನಿಯೋಜಿಸಿದ ಎಲ್ಲಾ ದಿನಗಳಲ್ಲೂ ನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ಈಗ ಅಲ್ಲಿ ಕೆಲಸ ಮಾಡಲು ಒಂದು ರೀತಿ ಸಂತೋಷವಾಗುತ್ತದೆ’ ಎಂದು ತಿಳಿಸಿದರು.</p>.<p>‘ಶುಶ್ರೂಷಕಿಯರು, ‘ಡಿ’ ಗ್ರೂಪ್ ನೌಕರರೂ ಭೀತಿಗೆ ಒಳಗಾಗಿದ್ದರು. ನಿರ್ಭೀತಿಯಿಂದ ಕೆಲಸ ಮಾಡಲು ಅವರಲ್ಲಿದ್ದ ಆತಂಕ ಹೋಗಲಾಡಿಸಿದ್ದೇವೆ. ಸೋಂಕಿತರಿಂದ ಕೋವಿಡ್-19 ಹರಡದಂತೆ ಕೈಗೊಳ್ಳಬೇಕಾದ ವಿಧಾನದ ಕುರಿತು ಮಾಹಿತಿ ನೀಡಿದ್ದೇವೆ. ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳ ಸಂಘದಿಂದ ‘ಚವನ್ ಪ್ರಾಶ್’ ಸೇರಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಗಳನ್ನು ಸಿಬ್ಬಂದಿಗೆ ನೀಡಿದ್ದೇವೆ. ಸೋಂಕಿತರಿಗೆ ಯಾವುದೇ ಔಷಧವನ್ನು ನೀಡಿಲ್ಲ’ ಎಂದರು.</p>.<p>‘ಸೋಂಕಿತರಾಗಿದ್ದ ವ್ಯಕ್ತಿಗಳಿಗೆ ನಿತ್ಯ ದೂರವಾಣಿ ಕರೆ ಮಾಡಿ ಗುಣಮುಖರಾಗುತ್ತೀರಿ, ಹೆದರುವ ಅಗತ್ಯವಿಲ್ಲ ಎಂದು ತಿಳಿ ಹೇಳಿದ್ದೇವೆ. ಕೆಲವರು ಬಟ್ಟೆ ಇಲ್ಲ ಎನ್ನುತ್ತಿದ್ದರು. ಅವರಿಗೆ ಹೊಸ ವಸ್ತ್ರ ತರಿಸಿಕೊಟ್ಟಿದ್ದೇವೆ’ ಎಂದರು.</p>.<p>‘ನನಗೆ ಬೆಳಿಗ್ಗೆಯ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ರಾತ್ರಿ ಅವಧಿಗೆ ಆಯುಷ್ ವೈದ್ಯ ಡಾ.ನಾರದಮುನಿ ಅವರನ್ನು ಇಲಾಖೆ ನಿಯೋಜಿಸಿತ್ತು. ನನ್ನಂತೆಯೇ ಅವರೂ ಶ್ರಮಿಸಿದ್ದಾರೆ. ನಾವಿಬ್ಬರೂ ಪಾಳಿವಾರು ಕೆಲಸ ಮಾಡಿದ್ದೇವೆ. ಒಂದು ವಾರ ನಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ‘ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ ನರ್ಸ್, ‘ಡಿ’ ಗ್ರೂಪ್ ನೌಕರರು ಹಾಗೂ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ದಾಖಲಾದ ಸೋಂಕಿತರು ಗುಣಮುಖರಾಗಿ ಹೊರ ಹೋಗುವವರೆಗೂ ಆತ್ಮಸ್ಥೈರ್ಯ ನೀಡಿದ್ದೇವೆ. ಆಯುಷ್ ವೈದ್ಯರು ಕರ್ತವ್ಯ ಪ್ರಜ್ಞೆ ಮೆರೆದಿದ್ದೇವೆ...’</p>.<p>‘ಕೋವಿಡ್-19’ ನಿಯಂತ್ರಣಕ್ಕೆ ಕಾರ್ಯನಿರ್ವಹಿಸುತ್ತಿರುವ ಕೋಟೆನಾಡಿನ ‘ಕೊರೊನಾ ವಾರಿಯರ್’ ಆಯುಷ್ ಇಲಾಖೆ ವೈದ್ಯ ಡಾ.ಟಿ.ಶಿವಕುಮಾರ್ ಅವರ ಮಾತಿದು. ‘ಆಯುಷ್’ ವೈದ್ಯರ ಕಾರ್ಯವೈಖರಿ ಕುರಿತು ಅವರು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.</p>.<p>‘ಮೊದಲ ದಿನ ಕೋವಿಡ್-19 ಆಸ್ಪತ್ರೆಯೊಳಗೆ ಪ್ರವೇಶಿಸಿದಾಗ ನನಗೂ ಆತಂಕ ಉಂಟಾಯಿತು. ಪವಿತ್ರವಾದ ವೈದ್ಯ ವೃತ್ತಿಯಲ್ಲಿರುವ ಕಾರಣ ಧೈರ್ಯ ತಂದುಕೊಂಡೆ. ಆನಂತರ ನಮಗೆ ಕರ್ತವ್ಯಕ್ಕೆ ನಿಯೋಜಿಸಿದ ಎಲ್ಲಾ ದಿನಗಳಲ್ಲೂ ನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ಈಗ ಅಲ್ಲಿ ಕೆಲಸ ಮಾಡಲು ಒಂದು ರೀತಿ ಸಂತೋಷವಾಗುತ್ತದೆ’ ಎಂದು ತಿಳಿಸಿದರು.</p>.<p>‘ಶುಶ್ರೂಷಕಿಯರು, ‘ಡಿ’ ಗ್ರೂಪ್ ನೌಕರರೂ ಭೀತಿಗೆ ಒಳಗಾಗಿದ್ದರು. ನಿರ್ಭೀತಿಯಿಂದ ಕೆಲಸ ಮಾಡಲು ಅವರಲ್ಲಿದ್ದ ಆತಂಕ ಹೋಗಲಾಡಿಸಿದ್ದೇವೆ. ಸೋಂಕಿತರಿಂದ ಕೋವಿಡ್-19 ಹರಡದಂತೆ ಕೈಗೊಳ್ಳಬೇಕಾದ ವಿಧಾನದ ಕುರಿತು ಮಾಹಿತಿ ನೀಡಿದ್ದೇವೆ. ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳ ಸಂಘದಿಂದ ‘ಚವನ್ ಪ್ರಾಶ್’ ಸೇರಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಗಳನ್ನು ಸಿಬ್ಬಂದಿಗೆ ನೀಡಿದ್ದೇವೆ. ಸೋಂಕಿತರಿಗೆ ಯಾವುದೇ ಔಷಧವನ್ನು ನೀಡಿಲ್ಲ’ ಎಂದರು.</p>.<p>‘ಸೋಂಕಿತರಾಗಿದ್ದ ವ್ಯಕ್ತಿಗಳಿಗೆ ನಿತ್ಯ ದೂರವಾಣಿ ಕರೆ ಮಾಡಿ ಗುಣಮುಖರಾಗುತ್ತೀರಿ, ಹೆದರುವ ಅಗತ್ಯವಿಲ್ಲ ಎಂದು ತಿಳಿ ಹೇಳಿದ್ದೇವೆ. ಕೆಲವರು ಬಟ್ಟೆ ಇಲ್ಲ ಎನ್ನುತ್ತಿದ್ದರು. ಅವರಿಗೆ ಹೊಸ ವಸ್ತ್ರ ತರಿಸಿಕೊಟ್ಟಿದ್ದೇವೆ’ ಎಂದರು.</p>.<p>‘ನನಗೆ ಬೆಳಿಗ್ಗೆಯ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ರಾತ್ರಿ ಅವಧಿಗೆ ಆಯುಷ್ ವೈದ್ಯ ಡಾ.ನಾರದಮುನಿ ಅವರನ್ನು ಇಲಾಖೆ ನಿಯೋಜಿಸಿತ್ತು. ನನ್ನಂತೆಯೇ ಅವರೂ ಶ್ರಮಿಸಿದ್ದಾರೆ. ನಾವಿಬ್ಬರೂ ಪಾಳಿವಾರು ಕೆಲಸ ಮಾಡಿದ್ದೇವೆ. ಒಂದು ವಾರ ನಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>