‘ಒಂದು ತಿಂಗಳಿನಿಂದ ನಾಯಕನಹಟ್ಟಿ ಹೋಬಳಿಯಾದ್ಯಂತ ಕುರಿಗಳು ಸತ್ತಿವೆ. ಇದಕ್ಕೆ ಸೂಕ್ತಚಿಕಿತ್ಸೆ ನೀಡಿ ಎಂದು ಪಶು ವೈದ್ಯಾಧಿಕಾರಿಗಳನ್ನು ಕೇಳಿದರೆ, ಈ ರೋಗಕ್ಕೆ ಚಿಕಿತ್ಸೆ ನಮ್ಮಲ್ಲಿ ಲಭ್ಯವಿಲ್ಲ. ಸರ್ಕಾರದಿಂದಾಗಲಿ, ನಮ್ಮ ಇಲಾಖೆಯಿಂದಾಗಲಿ ಲಸಿಕೆ ಉಚಿತ ಸರಬರಾಜು ಇಲ್ಲ ಎಂದು ಖಾಸಗಿ ಔಷಧ ಅಂಗಡಿಗಳಿಗೆ ಚೀಟಿ ಬರೆಯುತ್ತಾರೆ’ ಎಂದು ರೈತರಾದ ರೇಖಲಗೆರೆ ಗೌರಮ್ಮ, ಬಲ್ಲನಾಯಕನಹಟ್ಟಿ ಕಾಮಯ್ಯ, ಕೋಲಮ್ಮನಹಳ್ಳಿ ಗ್ರಾಮದ ಕುಮಾರ, ಮನುಮೈನಹಟ್ಟಿ ನಿರಂಜನ ಹೇಳುತ್ತಾರೆ.