ಹಿರಿಯೂರು: ತಾಲ್ಲೂಕಿನ ಗಾಂಧಿನಗರ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಎರಡು ವರ್ಷದ ಮೇಲಾಗಿದ್ದು, ಘಟಕವನ್ನು ತಕ್ಷಣ ದುರಸ್ತಿ ಮಾಡಿಸದಿದ್ದರೆ ಗ್ರಾಮಸ್ಥರೆಲ್ಲ ಒಟ್ಟಾಗಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಗ್ರಾಮದ ಮುಖಂಡರಾದ ಕೆ. ಓಬಳೇಶ್, ಎಸ್. ಹನುಮಂತಪ್ಪ, ಎಸ್. ಲಿಂಗಪ್ಪ, ಜಿ. ಆಂಜನೇಯ, ನಾಗಾರ್ಜುನ ಹಾಗೂ ನರಸಿಂಹಯ್ಯ ಎಚ್ಚರಿಸಿದ್ದಾರೆ.