ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಮಾರುಕಟ್ಟೆಗೆ ಬರಲು ಗಿರ್‌ ದೇಸಿ ಹಾಲು ಸಿದ್ಧ

ಶಾಸಕ ಟಿ. ರಘುಮೂರ್ತಿ ಸೇರಿ ಜಿಲ್ಲೆಯ ಹತ್ತು ಮಂದಿ ವಿನೂತನ ಪ್ರಯತ್ನ
Last Updated 11 ಜುಲೈ 2021, 5:53 IST
ಅಕ್ಷರ ಗಾತ್ರ

ಚಿತ್ರದುರ್ಗ: ಪೌಷ್ಟಿಕಾಂಶವುಳ್ಳ ಗೀರ್‌ ದೇಸಿ ಹಸುವಿನ ಹಾಲು ಸಿಗುವುದು ಅಪರೂಪ. ಇಂತಹ ಶುದ್ಧ ಹಾಲನ್ನು ಗ್ರಾಹಕರಿಗೆ ನೇರವಾಗಿ ಗೋ ಪಾಲಕರಿಂದ ತಲುಪಿಸುವ ಪ್ರಯತ್ನ ನಗರದಲ್ಲಿ ಆರಂಭವಾಗಲಿದೆ.

ಜುಲೈ 11ರಂದು ನಗರದ ಜೆಸಿಆರ್ ಮುಖ್ಯ ರಸ್ತೆಯ ಸಾಯಿಬಾಬಾ ದೇಗುಲ ಆವರಣದ ‘ದುರ್ಗಾಂಬಾಮೃತ ಎ2 ಮಿಲ್ಕ್’ ಹೆಸರಿನಲ್ಲಿ ಹಾಲಿನ ಮಾರಾಟ ಕೇಂದ್ರ ಆರಂಭವಾಗುತ್ತಿದೆ.

‘ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಸೇರಿ ಜಿಲ್ಲೆಯ ಗೀರ್ ಹಸು ಸಾಕಣೆ ತಂಡದ 10 ಸದಸ್ಯರು ಗೋ ಪಾಲನೆಯಲ್ಲಿ ತೊಡಗಿದ್ದು, ಈ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದೇವೆ. ಸದ್ಯ ಇದು ಜಿಲ್ಲೆಯ ಏಕೈಕ ಮಾರಾಟ ಕೇಂದ್ರವಾಗಿದೆ’ ಎಂದು ತಂಡದ ಸದಸ್ಯ ನಾಗರಾಜ್ ಭಟ್ ತಿಳಿಸಿದ್ದಾರೆ.

ಗೀರ್ ಹಾಲಿನ ಜೊತೆಗೆ ಇತರ ಉತ್ಪನ್ನಗಳಾದ ತುಪ್ಪ, ಹಾಲು ಹಾಗೂ ಸಿಹಿ ತಿನಿಸುಗಳು ದೊರೆಯಲಿವೆ. ತಂಡದಲ್ಲಿ ಶಾಸಕರನ್ನು ಒಳಗೊಂಡು ಜ್ಞಾನೇಶ್, ನಾಗರಾಜ್, ಮನು, ರಾಜಣ್ಣ, ಕುಲಕರ್ಣಿ, ದಶರಥ, ಸತೀಶ್ ಒಗ್ಗೂಡಿ ಇದಕ್ಕೆ ಕೈಹಾಕಿದ್ದಾರೆ.

‘ಗೀರ್ ಹಸುಗಳ ಸಾಕಣೆ ಜಿಲ್ಲೆಯಲ್ಲಿ ಈಚೆಗೆ ಹೆಚ್ಚುತ್ತಿದೆ. ಈ ಹಾಲು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಶುದ್ಧ ಹಾಲನ್ನೇ ಗ್ರಾಹಕರಿಗೆ ನೀಡಲಾಗುವುದು’ ಎಂದು ತಂಡದ ಸದಸ್ಯರು ಭರವಸೆನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT