<p><strong>ಚಿತ್ರದುರ್ಗ: </strong>ಪೌಷ್ಟಿಕಾಂಶವುಳ್ಳ ಗೀರ್ ದೇಸಿ ಹಸುವಿನ ಹಾಲು ಸಿಗುವುದು ಅಪರೂಪ. ಇಂತಹ ಶುದ್ಧ ಹಾಲನ್ನು ಗ್ರಾಹಕರಿಗೆ ನೇರವಾಗಿ ಗೋ ಪಾಲಕರಿಂದ ತಲುಪಿಸುವ ಪ್ರಯತ್ನ ನಗರದಲ್ಲಿ ಆರಂಭವಾಗಲಿದೆ.</p>.<p>ಜುಲೈ 11ರಂದು ನಗರದ ಜೆಸಿಆರ್ ಮುಖ್ಯ ರಸ್ತೆಯ ಸಾಯಿಬಾಬಾ ದೇಗುಲ ಆವರಣದ ‘ದುರ್ಗಾಂಬಾಮೃತ ಎ2 ಮಿಲ್ಕ್’ ಹೆಸರಿನಲ್ಲಿ ಹಾಲಿನ ಮಾರಾಟ ಕೇಂದ್ರ ಆರಂಭವಾಗುತ್ತಿದೆ.</p>.<p>‘ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಸೇರಿ ಜಿಲ್ಲೆಯ ಗೀರ್ ಹಸು ಸಾಕಣೆ ತಂಡದ 10 ಸದಸ್ಯರು ಗೋ ಪಾಲನೆಯಲ್ಲಿ ತೊಡಗಿದ್ದು, ಈ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದೇವೆ. ಸದ್ಯ ಇದು ಜಿಲ್ಲೆಯ ಏಕೈಕ ಮಾರಾಟ ಕೇಂದ್ರವಾಗಿದೆ’ ಎಂದು ತಂಡದ ಸದಸ್ಯ ನಾಗರಾಜ್ ಭಟ್ ತಿಳಿಸಿದ್ದಾರೆ.</p>.<p>ಗೀರ್ ಹಾಲಿನ ಜೊತೆಗೆ ಇತರ ಉತ್ಪನ್ನಗಳಾದ ತುಪ್ಪ, ಹಾಲು ಹಾಗೂ ಸಿಹಿ ತಿನಿಸುಗಳು ದೊರೆಯಲಿವೆ. ತಂಡದಲ್ಲಿ ಶಾಸಕರನ್ನು ಒಳಗೊಂಡು ಜ್ಞಾನೇಶ್, ನಾಗರಾಜ್, ಮನು, ರಾಜಣ್ಣ, ಕುಲಕರ್ಣಿ, ದಶರಥ, ಸತೀಶ್ ಒಗ್ಗೂಡಿ ಇದಕ್ಕೆ ಕೈಹಾಕಿದ್ದಾರೆ.</p>.<p>‘ಗೀರ್ ಹಸುಗಳ ಸಾಕಣೆ ಜಿಲ್ಲೆಯಲ್ಲಿ ಈಚೆಗೆ ಹೆಚ್ಚುತ್ತಿದೆ. ಈ ಹಾಲು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಶುದ್ಧ ಹಾಲನ್ನೇ ಗ್ರಾಹಕರಿಗೆ ನೀಡಲಾಗುವುದು’ ಎಂದು ತಂಡದ ಸದಸ್ಯರು ಭರವಸೆನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ: </strong>ಪೌಷ್ಟಿಕಾಂಶವುಳ್ಳ ಗೀರ್ ದೇಸಿ ಹಸುವಿನ ಹಾಲು ಸಿಗುವುದು ಅಪರೂಪ. ಇಂತಹ ಶುದ್ಧ ಹಾಲನ್ನು ಗ್ರಾಹಕರಿಗೆ ನೇರವಾಗಿ ಗೋ ಪಾಲಕರಿಂದ ತಲುಪಿಸುವ ಪ್ರಯತ್ನ ನಗರದಲ್ಲಿ ಆರಂಭವಾಗಲಿದೆ.</p>.<p>ಜುಲೈ 11ರಂದು ನಗರದ ಜೆಸಿಆರ್ ಮುಖ್ಯ ರಸ್ತೆಯ ಸಾಯಿಬಾಬಾ ದೇಗುಲ ಆವರಣದ ‘ದುರ್ಗಾಂಬಾಮೃತ ಎ2 ಮಿಲ್ಕ್’ ಹೆಸರಿನಲ್ಲಿ ಹಾಲಿನ ಮಾರಾಟ ಕೇಂದ್ರ ಆರಂಭವಾಗುತ್ತಿದೆ.</p>.<p>‘ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಸೇರಿ ಜಿಲ್ಲೆಯ ಗೀರ್ ಹಸು ಸಾಕಣೆ ತಂಡದ 10 ಸದಸ್ಯರು ಗೋ ಪಾಲನೆಯಲ್ಲಿ ತೊಡಗಿದ್ದು, ಈ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದೇವೆ. ಸದ್ಯ ಇದು ಜಿಲ್ಲೆಯ ಏಕೈಕ ಮಾರಾಟ ಕೇಂದ್ರವಾಗಿದೆ’ ಎಂದು ತಂಡದ ಸದಸ್ಯ ನಾಗರಾಜ್ ಭಟ್ ತಿಳಿಸಿದ್ದಾರೆ.</p>.<p>ಗೀರ್ ಹಾಲಿನ ಜೊತೆಗೆ ಇತರ ಉತ್ಪನ್ನಗಳಾದ ತುಪ್ಪ, ಹಾಲು ಹಾಗೂ ಸಿಹಿ ತಿನಿಸುಗಳು ದೊರೆಯಲಿವೆ. ತಂಡದಲ್ಲಿ ಶಾಸಕರನ್ನು ಒಳಗೊಂಡು ಜ್ಞಾನೇಶ್, ನಾಗರಾಜ್, ಮನು, ರಾಜಣ್ಣ, ಕುಲಕರ್ಣಿ, ದಶರಥ, ಸತೀಶ್ ಒಗ್ಗೂಡಿ ಇದಕ್ಕೆ ಕೈಹಾಕಿದ್ದಾರೆ.</p>.<p>‘ಗೀರ್ ಹಸುಗಳ ಸಾಕಣೆ ಜಿಲ್ಲೆಯಲ್ಲಿ ಈಚೆಗೆ ಹೆಚ್ಚುತ್ತಿದೆ. ಈ ಹಾಲು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಶುದ್ಧ ಹಾಲನ್ನೇ ಗ್ರಾಹಕರಿಗೆ ನೀಡಲಾಗುವುದು’ ಎಂದು ತಂಡದ ಸದಸ್ಯರು ಭರವಸೆನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>