<p><strong>ಚಿತ್ರದುರ್ಗ</strong>: ವೇತನ ಕಡಿತ ಹಾಗೂ ಇಎಸ್ಐ, ಪಿಎಫ್ ಪಾವತಿಸದ ಕಾರಣ ಬೆಂಗಳೂರಿನಲ್ಲಿ ನಡೆಯುತ್ತಿರುವ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಮುಷ್ಕರಕ್ಕೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಬೆಂಬಲ ಸೂಚಿಸಿ ಶುಕ್ರವಾರ ಬಂದ್ ಆಚರಿಸಿದರು.</p>.<p>ಸಿಬ್ಬಂದಿ ಪ್ರತಿಭಟನೆಯಿಂದಾಗಿ ರೋಗಿಗಳು ಪರದಾಡಿದರು. ಗುರುವಾರದಿಂದಲೇ ಕೇಂದ್ರಗಳು ಬಂದ್ ಆದ ಕಾರಣ ಡಯಾಲಿಸಿಸ್ ಇಲ್ಲದೇ ತೀವ್ರ ಸಮಸ್ಯೆ ಅನುಭವಿಸಿದರು. ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿಯ ಕೇಂದ್ರದಲ್ಲಿ ನಿತ್ಯ ಮೂರು ಪಾಳಿಯಲ್ಲಿ 27 ರೋಗಿಗಳು ಡಯಾಲಿಸಿಸ್ಗೆ ಒಳಗಾಗುತ್ತಾರೆ.</p>.<p>ಗುರುವಾರ ಬಂದ್ ಆಗಿದ್ದರೂ ನಾಳೆ ಸರಿ ಹೋಗುತ್ತದೆ ಎಂಬ ಭರವಸೆ ರೋಗಿಗಳಲ್ಲಿತ್ತು. ಆದರೆ, ಬಂದ್ ಮುಂದುವರಿದಿದ್ದರಿಂದ ಬೆಳಿಗ್ಗೆಯಿಂದಲೇ ರೋಗಿಗಳು ಸಂಕಷ್ಟಕ್ಕೆ ಸಿಲುಕಿದರು.</p>.<p>ಹಿರಿಯೂರು, ಚಳ್ಳಕೆರೆ, ಜಗಳೂರು ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ರೋಗಿಗಳು ಕೇಂದ್ರದ ಆವರಣದಲ್ಲಿ ಕಾದು ಸುಸ್ತಾದರು. ಬಳಿಕ ಜಿಲ್ಲಾ ಆಸ್ಪತ್ರೆಯಿಂದ ಪತ್ರಗಳನ್ನು ನೀಡಿ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ 6 ರೋಗಿಗಳನ್ನು ಕಳುಹಿಸಲಾಯಿತು.</p>.<p>‘ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ಗೆ ದುಬಾರಿ ಹಣ ಪಾವತಿಸಬೇಕು. ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಿ ಬಡ ರೋಗಿಗಳ ಜೀವ ಉಳಿಸಬೇಕು’ ಎಂದು ಡಯಾಲಿಸಿಸ್ಗೆ ಒಳಗಾದ ಪ್ರತಾಪ್ ರುದ್ರದೇವ್ ಒತ್ತಾಯಿಸಿದರು.</p>.<p>*<br />ಮಧ್ಯಾಹ್ನದ ಬಳಿಕ 6 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರು. ಎರಡು ಪಾಳಿಯಲ್ಲಿ 16 ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗಿದೆ. ಶನಿವಾರದಿಂದ ಎಂದಿನಂತೆ ಡಯಾಲಿಸಿಸ್ ನಡೆಯಲಿದೆ.<br /><em><strong>-ಡಾ.ಬಸವರಾಜಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ವೇತನ ಕಡಿತ ಹಾಗೂ ಇಎಸ್ಐ, ಪಿಎಫ್ ಪಾವತಿಸದ ಕಾರಣ ಬೆಂಗಳೂರಿನಲ್ಲಿ ನಡೆಯುತ್ತಿರುವ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಮುಷ್ಕರಕ್ಕೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಬೆಂಬಲ ಸೂಚಿಸಿ ಶುಕ್ರವಾರ ಬಂದ್ ಆಚರಿಸಿದರು.</p>.<p>ಸಿಬ್ಬಂದಿ ಪ್ರತಿಭಟನೆಯಿಂದಾಗಿ ರೋಗಿಗಳು ಪರದಾಡಿದರು. ಗುರುವಾರದಿಂದಲೇ ಕೇಂದ್ರಗಳು ಬಂದ್ ಆದ ಕಾರಣ ಡಯಾಲಿಸಿಸ್ ಇಲ್ಲದೇ ತೀವ್ರ ಸಮಸ್ಯೆ ಅನುಭವಿಸಿದರು. ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿಯ ಕೇಂದ್ರದಲ್ಲಿ ನಿತ್ಯ ಮೂರು ಪಾಳಿಯಲ್ಲಿ 27 ರೋಗಿಗಳು ಡಯಾಲಿಸಿಸ್ಗೆ ಒಳಗಾಗುತ್ತಾರೆ.</p>.<p>ಗುರುವಾರ ಬಂದ್ ಆಗಿದ್ದರೂ ನಾಳೆ ಸರಿ ಹೋಗುತ್ತದೆ ಎಂಬ ಭರವಸೆ ರೋಗಿಗಳಲ್ಲಿತ್ತು. ಆದರೆ, ಬಂದ್ ಮುಂದುವರಿದಿದ್ದರಿಂದ ಬೆಳಿಗ್ಗೆಯಿಂದಲೇ ರೋಗಿಗಳು ಸಂಕಷ್ಟಕ್ಕೆ ಸಿಲುಕಿದರು.</p>.<p>ಹಿರಿಯೂರು, ಚಳ್ಳಕೆರೆ, ಜಗಳೂರು ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ರೋಗಿಗಳು ಕೇಂದ್ರದ ಆವರಣದಲ್ಲಿ ಕಾದು ಸುಸ್ತಾದರು. ಬಳಿಕ ಜಿಲ್ಲಾ ಆಸ್ಪತ್ರೆಯಿಂದ ಪತ್ರಗಳನ್ನು ನೀಡಿ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ 6 ರೋಗಿಗಳನ್ನು ಕಳುಹಿಸಲಾಯಿತು.</p>.<p>‘ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ಗೆ ದುಬಾರಿ ಹಣ ಪಾವತಿಸಬೇಕು. ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಿ ಬಡ ರೋಗಿಗಳ ಜೀವ ಉಳಿಸಬೇಕು’ ಎಂದು ಡಯಾಲಿಸಿಸ್ಗೆ ಒಳಗಾದ ಪ್ರತಾಪ್ ರುದ್ರದೇವ್ ಒತ್ತಾಯಿಸಿದರು.</p>.<p>*<br />ಮಧ್ಯಾಹ್ನದ ಬಳಿಕ 6 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರು. ಎರಡು ಪಾಳಿಯಲ್ಲಿ 16 ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗಿದೆ. ಶನಿವಾರದಿಂದ ಎಂದಿನಂತೆ ಡಯಾಲಿಸಿಸ್ ನಡೆಯಲಿದೆ.<br /><em><strong>-ಡಾ.ಬಸವರಾಜಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>