ನೇತ್ರ ದೋಷದಿಂದ ಬಳಲುತ್ತಿರುವ ತಾಲ್ಲೂಕಿನ ಹುಲಿಕುಂಟೆ ಗ್ರಾಮದ ಕರಿಯಪ್ಪ (70), ಅವರ ಪತ್ನಿ ತಿಪ್ಪಮ್ಮ (60)(ಅವರಿಗೆ ಮೂಳೆ ಸವೆತ) ಮತ್ತು ಮಗ ವೀರನಾಗಪ್ಪ (35) ಅವರು ಲಾಕ್ಡೌನ್ನಿಂದಾಗಿ ಮನೆ ಮುಂದಿನ ಬೀದಿಯಲ್ಲಿ ಕುಳಿತು ಬೇಡುವ ಮೂಲಕ ಹಸಿವನ್ನು ನೀಗಿಸಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ದಿನದ ತುತ್ತಿಗೂ ಪರದಾಡುತ್ತಿರುವ ಈ ಕುಟುಂಬದ ಸ್ಥಿತಿ ‘ಬಡವರ ಗೋಳು ಗಿರಿಗೆ ಮುಟ್ಟೀತೆ’ ಎನ್ನುವಂತಾಗಿದೆ.