<p><strong>ಚಿತ್ರದುರ್ಗ: </strong>‘ದಲಿತ, ಹಿಂದುಳಿದ, ಶೋಷಿತ ಸಮುದಾಯದಲ್ಲಿನ ಕೆಲವರಿಂದಲೇ ಅಂಬೇಡ್ಕರ್ ಸಿದ್ಧಾಂತಕ್ಕೆ ಮಸಿ ಬಳಿಯುವ ಕೆಲಸ ಆಗುತ್ತಿರುವುದು ನೋವಿನ ಸಂಗತಿ. ಇಂತಹ ಕೆಲಸಕ್ಕೆ ಯಾರೂ ಕೈಹಾಕಬೇಡಿ’ ಎಂದು ಹಿರಿಯೂರು ಆದಿಜಾಂಬವ ಗುರುಪೀಠದ ಷಡಾಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ಸಲಹೆ ನೀಡಿದರು.</p>.<p>ನಗರಸಭೆ ಸಮೀಪ ಅಂಬೇಡ್ಕರ್ ಸೇನೆ ಜಿಲ್ಲಾ ಸಮಿತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 64ನೇ ಪರಿನಿರ್ವಾಣ ಅಂಗವಾಗಿ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರ, ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಆರ್ಥಿಕ ತಜ್ಞ, ಸಮಾಜಮುಖಿ ಹೋರಾಟಗಾರ ಅಂಬೇಡ್ಕರ್ ಅವರ ವಿಚಾರವನ್ನು ಯುವಸಮೂಹಕ್ಕೆ ತಿಳಿಸಬೇಕಿದೆ. ಪುಸ್ತಕ ಪ್ರೇಮಿಯಾದ ಅವರನ್ನು ಅರಿತುಕೊಂಡು ಇತಿಹಾಸ ನಿರ್ಮಿಸಬೇಕಿದೆ. ಹಿಂದುಳಿದ ಸಮುದಾಯದವರು ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಅನಕ್ಷರತೆ, ಶೋಷಣೆ, ದೌರ್ಜನ್ಯ, ದಬ್ಬಾಳಿಕೆ ಹೊಸಕಿಹಾಕಬೇಕಿದೆ’ ಎಂದು ಸಲಹೆ ನೀಡಿದರು.</p>.<p>ನಿವೃತ್ತ ಪ್ರಾಂಶುಪಾಲ ಜೆ.ಯಾದವರೆಡ್ಡಿ, ‘ಅಂಬೇಡ್ಕರ್ ಶೋಷಿತ ಜಗತ್ತಿನ ನಾಯಕ. ಅದಕ್ಕಾಗಿ ಎಂದಿಗೂ ಒಂದು ಗುಂಪಿಗೆ ಸೀಮಿತಗೊಳಿಸಬೇಡಿ. ಶೋಷಣೆ, ದೌರ್ಜನ್ಯದ ವಿರುದ್ಧ ಶಾಂತಿಯುತವಾಗಿ ಪೆನ್ನಿನ ಮೂಲಕ ಉತ್ತರ ನೀಡಿದ ಯುಗ ಪ್ರವರ್ತಕ’ ಎಂದು ಬಣ್ಣಿಸಿದರು.</p>.<p>ಅಂಬೇಡ್ಕರ್ ಸೇನೆ ರಾಜ್ಯ ಘಟಕದ ಅಧ್ಯಕ್ಷ ಪಿ.ಮೂರ್ತಿ, ‘ದಲಿತರ ಕಣ್ಣು ತೆರೆಸುವ ಮೂಲಕ ಬೆಳಕು ಕೊಟ್ಟವರು ಅಂಬೇಡ್ಕರ್. ವಿದೇಶಗಳಲ್ಲಿ ಅವರನ್ನು ಆರಾಧಿಸಲಾಗುತ್ತಿದೆ. ನಮ್ಮ ದೇಶದಲ್ಲೂ ಇನ್ನಷ್ಟೂ ಗೌರವಿಸುವ ಮನಸುಗಳು ಬೇಕಿವೆ’ ಎಂದು ಹೇಳಿದರು.</p>.<p>ಸಹ ಪ್ರಾದ್ಯಾಪಕ ಡಾ.ಎಸ್.ಆರ್. ಲೇಪಾಕ್ಷಿ, ಸೇನೆ ಮುಖಂಡರಾದ ಎ.ಮಂಜುನಾಥ ತಾಳಿಕೆರೆ, ಜೆ.ಡಿ. ಸಂತೋಷ್ಕುಮಾರ್, ಬಾಳೆಕಾಯಿ ಶ್ರೀನಿವಾಸ್, ಸಮರ್ಥರಾಯ್, ನರಸಿಂಹರಾಜ, ತಾರಕೇಶ್ವರಿ, ಅಂಗಡಿ ಮಂಜಣ್ಣ, ಶಿಲ್ಪಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ: </strong>‘ದಲಿತ, ಹಿಂದುಳಿದ, ಶೋಷಿತ ಸಮುದಾಯದಲ್ಲಿನ ಕೆಲವರಿಂದಲೇ ಅಂಬೇಡ್ಕರ್ ಸಿದ್ಧಾಂತಕ್ಕೆ ಮಸಿ ಬಳಿಯುವ ಕೆಲಸ ಆಗುತ್ತಿರುವುದು ನೋವಿನ ಸಂಗತಿ. ಇಂತಹ ಕೆಲಸಕ್ಕೆ ಯಾರೂ ಕೈಹಾಕಬೇಡಿ’ ಎಂದು ಹಿರಿಯೂರು ಆದಿಜಾಂಬವ ಗುರುಪೀಠದ ಷಡಾಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ಸಲಹೆ ನೀಡಿದರು.</p>.<p>ನಗರಸಭೆ ಸಮೀಪ ಅಂಬೇಡ್ಕರ್ ಸೇನೆ ಜಿಲ್ಲಾ ಸಮಿತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 64ನೇ ಪರಿನಿರ್ವಾಣ ಅಂಗವಾಗಿ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರ, ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಆರ್ಥಿಕ ತಜ್ಞ, ಸಮಾಜಮುಖಿ ಹೋರಾಟಗಾರ ಅಂಬೇಡ್ಕರ್ ಅವರ ವಿಚಾರವನ್ನು ಯುವಸಮೂಹಕ್ಕೆ ತಿಳಿಸಬೇಕಿದೆ. ಪುಸ್ತಕ ಪ್ರೇಮಿಯಾದ ಅವರನ್ನು ಅರಿತುಕೊಂಡು ಇತಿಹಾಸ ನಿರ್ಮಿಸಬೇಕಿದೆ. ಹಿಂದುಳಿದ ಸಮುದಾಯದವರು ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಅನಕ್ಷರತೆ, ಶೋಷಣೆ, ದೌರ್ಜನ್ಯ, ದಬ್ಬಾಳಿಕೆ ಹೊಸಕಿಹಾಕಬೇಕಿದೆ’ ಎಂದು ಸಲಹೆ ನೀಡಿದರು.</p>.<p>ನಿವೃತ್ತ ಪ್ರಾಂಶುಪಾಲ ಜೆ.ಯಾದವರೆಡ್ಡಿ, ‘ಅಂಬೇಡ್ಕರ್ ಶೋಷಿತ ಜಗತ್ತಿನ ನಾಯಕ. ಅದಕ್ಕಾಗಿ ಎಂದಿಗೂ ಒಂದು ಗುಂಪಿಗೆ ಸೀಮಿತಗೊಳಿಸಬೇಡಿ. ಶೋಷಣೆ, ದೌರ್ಜನ್ಯದ ವಿರುದ್ಧ ಶಾಂತಿಯುತವಾಗಿ ಪೆನ್ನಿನ ಮೂಲಕ ಉತ್ತರ ನೀಡಿದ ಯುಗ ಪ್ರವರ್ತಕ’ ಎಂದು ಬಣ್ಣಿಸಿದರು.</p>.<p>ಅಂಬೇಡ್ಕರ್ ಸೇನೆ ರಾಜ್ಯ ಘಟಕದ ಅಧ್ಯಕ್ಷ ಪಿ.ಮೂರ್ತಿ, ‘ದಲಿತರ ಕಣ್ಣು ತೆರೆಸುವ ಮೂಲಕ ಬೆಳಕು ಕೊಟ್ಟವರು ಅಂಬೇಡ್ಕರ್. ವಿದೇಶಗಳಲ್ಲಿ ಅವರನ್ನು ಆರಾಧಿಸಲಾಗುತ್ತಿದೆ. ನಮ್ಮ ದೇಶದಲ್ಲೂ ಇನ್ನಷ್ಟೂ ಗೌರವಿಸುವ ಮನಸುಗಳು ಬೇಕಿವೆ’ ಎಂದು ಹೇಳಿದರು.</p>.<p>ಸಹ ಪ್ರಾದ್ಯಾಪಕ ಡಾ.ಎಸ್.ಆರ್. ಲೇಪಾಕ್ಷಿ, ಸೇನೆ ಮುಖಂಡರಾದ ಎ.ಮಂಜುನಾಥ ತಾಳಿಕೆರೆ, ಜೆ.ಡಿ. ಸಂತೋಷ್ಕುಮಾರ್, ಬಾಳೆಕಾಯಿ ಶ್ರೀನಿವಾಸ್, ಸಮರ್ಥರಾಯ್, ನರಸಿಂಹರಾಜ, ತಾರಕೇಶ್ವರಿ, ಅಂಗಡಿ ಮಂಜಣ್ಣ, ಶಿಲ್ಪಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>