‘ಇಂದಿರಾ ಕ್ಯಾಂಟೀನ್ ಕುರಿತು ಪ್ರತಿಕ್ರಿಯಿಸುವ ಮೊದಲು ಸಿದ್ದರಾಮಯ್ಯನವರು ತಾವೊಬ್ಬ ಮಾಜಿ ಮುಖ್ಯಮಂತ್ರಿ ಎನ್ನುವುದನ್ನು ನೆನಪಿಡಬೇಕಿತ್ತು. ಕಾಂಗ್ರೆಸ್ನವರು ಬಾರ್ಗೆ ಹೋಗೋದೇ ಇಲ್ವಾ? ಅವರ್ಯಾರಿಗೂ ಬಾರ್ ಗೊತ್ತಿಲ್ವಾ? ಹಸಿವಿಗೂ ಇಂದಿರಾ ಗಾಂಧಿಯವರಿಗೂ ಏನು ಸಂಬಂಧ? ಇಂದಿರಾ ಗಾಂಧಿ ಬಗ್ಗೆ ಗೌರವ ಇದೆ. ಹೋಲಿಕೆ ಮಾಡುವ ಮೊದಲು ಯೋಚಿಸಬೇಕು’ ಎಂದು ಪ್ರತಿಕ್ರಿಯಿಸಿದರು. ಸಿ.ಟಿ. ರವಿ–ಕಾಂಗ್ರೆಸ್ ಮುಖಂಡರ ನಡುವಿನ ವಾಕ್ಸಮರದ ಕುರಿತು ಪ್ರತಿಕ್ರಿಯಿಸಿ, ‘ಮದ್ದಾನೆ–ಮದ್ದಾನೆ ಗುದ್ದಾಡುವಾಗ, ಗುಬ್ಬಿ ಹೋಗಿ ಬುದ್ಧಿ ಹೇಳುವುದು ಪೆದ್ದಲ್ಲವೇನೆ ಸರಸಿ’ ಎಂಬ ಡಿವಿಜಿಯವರ ಕವನದ ಉದಾಹರಣೆ ನೀಡಿದರು. ‘ಮದ್ದಾನೆಗಳು ಹುಕ್ಕಾ ಬಾರ್, ಆ ಬಾರ್ ಎಂದು ಗುದ್ದಾಡಲಿ. ನಾವೂ ನೀವು ರೈತರ ಬಗ್ಗೆ ಗುದ್ದಾಡೋಣ’ ಎಂದರು.