‘ಎಪಿಎಂಸಿ ದುರ್ಬಲಗೊಳಿಸುವ ಕಾನೂನು ಹಿಂಪಡೆಯದೇ ಇದ್ದರೆ ರೈತರ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಹತ್ತಾರು ಎಕರೆ ಜಮೀನು ಇಟ್ಟುಕೊಂಡ ರೈತರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ದೇಶದ 137 ಕೋಟಿ ಜನರು ರೈತ ಹೋರಾಟಕ್ಕೆ ಬೆಂಬಲ ನೀಡಬೇಕು. ರೈತರನ್ನು ಭಯೋತ್ಪಾದಕರೆಂದು ಜರಿದ ಸಿನಿಮಾ ನಟಿಯನ್ನು ಜೈಲಿಗೆ ಕಳುಹಿಸಬೇಕಾಗಿದ್ದ ಸರ್ಕಾರ, ರೈತರ ವಿರುದ್ಧ ಪ್ರಕರಣ ದಾಖಲಿಸಿದೆ’ ಎಂದು ಕಿಡಿಕಾರಿದರು.