‘ಜಮೀನಿನಲ್ಲಿ ಐದು ಕೊಳವೆಬಾವಿ ಕೊರೆಯಿಸಿದ್ದು, ಯಾವುದರಲ್ಲೂ ನೀರು ದೊರೆಯಲಿಲ್ಲ. ಹಾಗಾಗಿ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಸೊಸೈಟಿಯಲ್ಲಿ ಬೆಳೆ ಸಾಲ ಪಡೆದು ಬಿತ್ತನೆ ಮಾಡಲಾಗಿದೆ. ಈ ಬಾರಿ ಮುಸುಕಿನ ಜೋಳದಿಂದ ಬಂದ ಹಣದಲ್ಲಿ ಸಾಲ ತೀರಿಸುವ ಉದ್ದೇಶವಿತ್ತು. ಆದರೀಗ ಅದೂ ಇಲ್ಲ. ಬ್ಯಾಂಕ್ನವರಿಗೆ ಹೇಗೆ ಉತ್ತರಿಸುವುದೊ ತಿಳಿಯುತ್ತಿಲ್ಲ. ಸರ್ಕಾರ ಕೂಡಲೇ ಪರಿಹಾರ ನೀಡಬೇಕು’ ಎಂದು ಬಾಗೂರಿನ ರೈತ ಸುಪ್ರಿತ್ ಕೋರಿದದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್.ಈಶ ಅವರು, ‘ಹೊಸದುರ್ಗ ತಾಲ್ಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಆಗಸ್ಟ್, ಸೆಪ್ಟೆಂಬರ್ನಲ್ಲಿ ಮಳೆ ಇಲ್ಲದ ಕಾರಣ ಬೆಳೆ ಒಣಗುತ್ತಿವೆ. ತಾಲ್ಲೂಕಿನಲ್ಲಿ ಸಮೀಕ್ಷೆ ನಡೆಯುತ್ತಿದ್ದು, ಸರ್ಕಾರ ಶೀಘ್ರವೇ ತೀರ್ಮಾನ ಕೈಗೊಳ್ಳಲಿದೆ. ರೈತರು ಆತಂಕಪಡುವ ಅಗತ್ಯವಿಲ್ಲ’ ಎಂದರು.