ಟ್ರಕ್ ಚಾಲಕರಿಗೆ ನೆರವು: ನಾಯಕನಹಟ್ಟಿ ಪಟ್ಟಣದಲ್ಲಿ ರಾಜ್ಯಹೆದ್ದಾರಿ–45 ಹಾದು ಹೋಗಿದ್ದು, ದಾವಣಗೆರೆ, ಹೊಸಪೇಟೆ, ಮಹಾರಾಷ್ಟ್ರ, ಸೋಲಾಪುರ, ಬಳ್ಳಾರಿ, ಕೋಲಾರ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ನಿತ್ಯ ಅವಶ್ಯಕ ವಸ್ತುಗಳನ್ನು ತುಂಬಿಕೊಂಡು ನೂರಾರು ಟ್ರಕ್ಗಳು ಹಾದುಹೋಗುತ್ತವೆ. ಜೊತೆಗೆ ಪೆಟ್ರೋಲ್ ಡೀಸೆಲ್ ಸಾಗಿಸುವ ಟ್ಯಾಂಕರ್ಗಳು ಸಂಚರಿಸುತ್ತವೆ. ಲಾಕ್ಡೌನ್ನಿಂದಾಗಿ ಹೋಟೆಲ್ಗಳು ಬಂದ್ ಇರುವುದರಿಂದ ಮಾರ್ಗ ಮಧ್ಯೆ ಎಲ್ಲಿಯೂ ಈ ಟ್ರಕ್ ಚಾಲಕರಿಗೆ ಊಟ ದೊರೆಯುವುದಿಲ್ಲ. ಇದನ್ನು ಅರಿತ ಯುವಕರ ತಂಡ ನೀರಿನ ಪೌಚ್ಗಳ ಜೊತೆಗೆ ಉಪಾಹಾರದ ಪೊಟ್ಟಣಗಳನ್ನು ಹಿಡಿದು ರಾಜ್ಯ ಹೆದ್ದಾರಿಯಲ್ಲಿ ನಿಂತು ಹೋಗಿ ಬರುವ ವಾಹನ ಚಾಲಕರಿಗೆ ನೀಡುತ್ತಿದೆ.