2 ಸಾವಿರ ಚೀಲ ವಿತರಿಸಿದ್ದೇವೆ: ‘ರೈತರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಒಂದು ತಿಂಗಳಿನಿಂದ ಯೂರಿಯಾ ರಸಗೊಬ್ಬರ ವಿತರಿಸಲು ಕ್ರಮ ಕೈಗೊಂಡಿದ್ದೇವೆ. ಚಿತ್ರದುರ್ಗದಲ್ಲಿ ಒಂದು ಸಾವಿರ, ಭರಮಸಾಗರದಲ್ಲಿ 600, ಸಿರಿಗೆರೆ ವೃತ್ತದ ಸಮೀಪ 400 ಚೀಲ ವಿತರಿಸಲಾಗಿದೆ’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಭಾರತಮ್ಮ ತಿಳಿಸಿದರು.