ವಾಣಿವಿಲಾಸ ಜಲಾಶಯದ ಅಣೆಕಟ್ಟೆ ಕೆಳಭಾಗದಲ್ಲಿರುವ ಕಾತ್ರಿಕೇನಹಳ್ಳಿ, ಕುಲುಕಲಗುಂಡಿ, ಲಕ್ಕವ್ವನಹಳ್ಳಿ ಬ್ಯಾರೇಜುಗಳು ಬುಧವಾರ ರಾತ್ರಿಯ ಮಳೆಗೆ ಭರ್ತಿಯಾಗಿದ್ದು, ವೇದಾವತಿ ನದಿಯಲ್ಲಿ ಸಣ್ಣಪ್ರಮಾಣದಲ್ಲಿ ನೀರಿನ ಹರಿವಿತ್ತು. ಸುವರ್ಣಮುಖಿ ನದಿ ಪಾತ್ರದ ಮ್ಯಾದನಹೊಳೆ, ಕೂಡ್ಲಹಳ್ಳಿ, ಹೂವಿನಹೊಳೆ, ತೊರೆ ಓಬೇನಹಳ್ಳಿ, ಶಿಡ್ಲಯ್ಯನಕೋಟೆ, ಹೊಸಹಳ್ಳಿ ಬ್ಯಾರೇಜುಗಳು ಮೇ ತಿಂಗಳಲ್ಲಿ ಬಿದ್ದ ಮಳೆಗೆ ಪ್ರಥಮ ಬಾರಿಗೆ ಭರ್ತಿಯಾಗಿವೆ. ಜವನಗೊಂಡನಹಳ್ಳಿ ಹೋಬಳಿಯ ಬಹುತೇಕ ಹಳ್ಳಿಗಳಲ್ಲಿನ ಕೃಷಿಹೊಂಡಗಳು, ಚೆಕ್ಡ್ಯಾಂಗಳು ಭರ್ತಿಯಾಗಿದ್ದು, ಕೆರೆಗಳಿಗೆ ಅಲ್ಪ ಪ್ರಮಾಣದ ನೀರು ಹರಿದುಬಂದಿದೆ.