ಅರಣ್ಯ ಭೂಮಿ ಕೃಷಿಕರಿಗೆ ಸಾಗುವಳಿ ಪತ್ರ ವಿತರಣೆ ಮಾಡಲಾಗುವುದೆಂದು ಹಿಂದಿನ ಸರ್ಕಾರ ಪ್ರಚಾರ ಮಾಡಿದ್ದರಿಂದಾಗಿ ಕಾಯ್ದಿರಿಸಿದ ಕುದುರು ಕಣಿವೆ, ಲಕ್ಕಿಹಳ್ಳಿ ಅರಣ್ಯ ಪ್ರದೇಶ, ಕೈನಡು, ನೀರಗುಂದ ಸೇರಿ ಇನ್ನಿತರ ಗ್ರಾಮಗಳಲ್ಲಿ ಕಾವಲು ಹಾಗೂ ಸರ್ಕಾರಿ ಜಮೀನು ಸಾಕಷ್ಟು ಒತ್ತುವರಿಯಾಗಿತ್ತು. ಈಗ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಒತ್ತುವರಿ ಆಗುತ್ತಿದೆ.