ಗುಂಡಿಹಳ್ಳದ ಬ್ಯಾರೇಜ್ನಲ್ಲಿ 8 ಅಡಿ ಆಳದವರೆಗೂ ನೀರು ನಿಲ್ಲುತ್ತಿರುವುದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಇದರಿಂದ ಮಾಡದಕೆರೆ, ಕೆಂಕೆರೆ, ಮಲ್ಲಾಪುರ, ಗಡಿಯಪ್ಪನಹಟ್ಟಿ, ರಾಮಜ್ಜನಹಳ್ಳಿ, ಪೂಜಾರಹಟ್ಟಿ, ಬಂಟನಗವಿ ಗ್ರಾಮಗಳ ಹಲವು ರೈತರ ಕೊಳವೆಬಾವಿಗಳಿಗೆ ನೆರವಾಗಿದೆ. ಈ ಭಾಗದ ತೆಂಗು, ಅಡಿಕೆ ಹಾಗೂ ಬಾಳೆ ತೋಟಗಳಿಗೆ ಜೀವಕಳೆ ಬಂದಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.