‘ಗ್ರಾಮದ ಹಬ್ಬ, ಜಾತ್ರೆ ವೇಳೆ ಅವರು ಬಂದು ಪೂರ್ವಭಾವಿ ಸಭೆ ನಡೆಸಿ, ಸಾರು ಹಾಕಿದ ನಂತರವೇ ನಮ್ಮೂರಿನ ಮುತ್ತಿನ ಕುಮಾರಿ ಜಾತ್ರೆ ನಡೆಯುತ್ತದೆ. ಪ್ರತಿ ವರ್ಷ ಸರ್ಪೋತ್ಸವ, ಸಿಂಹೋತ್ಸವ ಮಾಡಿಸುತ್ತಾರೆ. ರಥ ಎಳೆದು ಭಕ್ತಿ ಸಮರ್ಪಿಸುತ್ತಾರೆ’ ಎನ್ನುತ್ತಾರೆ ಗಿರೀಶ್, ರಮೇಶ್, ಮಲ್ಲಿಕಾರ್ಜುನ್, ಸಂತೋಷ್, ನಾಗರಾಜ್.