<p><strong>ಮೊಳಕಾಲ್ಮುರು: ತಾ</strong>ಲ್ಲೂಕಿನ ಗಡಿಗ್ರಾಮವಾದ ಚಿಕ್ಕೋಬನಹಳ್ಳಿಯಲ್ಲಿ ಮೇ 11ರಂದು ಗ್ರಾಮದೇವತೆ ಕೆಂಚೋಬಳೇಶ್ವರಸ್ವಾಮಿ ದೇವಸ್ಥಾನ ಉದ್ಘಾಟನೆ ನಡೆಯಲಿದೆ.</p>.<p>ಕಾರ್ಯಕ್ರಮದ ಅಂಗವಾಗಿ ಸ್ವಾಮಿಯ ಉತ್ಸವಮೂರ್ತಿಗಳನ್ನು ಗ್ರಾಮಸ್ಥರು ವಿಜಯನಗರ ಜಿಲ್ಲೆಯ ಹಂಪಿಯ ತುಂಗಭದ್ರಾ ನದಿ ತೀರಕ್ಕೆ ಗಂಗಾಪೂಜೆಗೆ ಕರೆದೊಯ್ಯಲಾಗಿತ್ತು.</p>.<p>ಶುಕ್ರವಾರ ದೇವರ ಗ್ರಾಮಪ್ರವೇಶವಾಗಿದ್ದು, ಕುಂಭಮೇಳ, ಕಳಸ ಮೆರವಣಿಗೆ, ವಿವಿಧ ವಾದ್ಯಗಳ ಸಮ್ಮುಖದಲ್ಲಿ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ದೇವಸ್ಥಾನ ಪ್ರವೇಶ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.</p>.<p>ಶನಿವಾರ ಗಣಪತಿ, ಉಮಾಮಹೇಶ್ವರಿ, ಲಕ್ಷ್ಮೀ ನಾರಾಯಣ, ನವಗ್ರಹ, ಅಷ್ಟಲಕ್ಷ್ಮೀ, ರುದ್ರಾಭಿಷೇಕ, ಮಹಾ ಮೃತ್ಯುಂಜಯ ಹೋಮ ಆಯೋಜಿಸಲಾಗಿದೆ. ಮೇ 11ರಂದು ಬೆಳಿಗ್ಗೆ ಹೋಮ, ಕಳಶಾರೋಹಣ ನಡೆಯಲಿದೆ.</p>.<p>ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ, ಸಿದ್ದಯ್ಯನಕೋಟೆ ಬಸವಲಿಂಗ ಸ್ವಾಮೀಜಿ, ಬೋರೇಶ್ ಗುರೂಜಿ ಆಶ್ರಮದ ಶಿವಮೂರ್ತಿ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು: ತಾ</strong>ಲ್ಲೂಕಿನ ಗಡಿಗ್ರಾಮವಾದ ಚಿಕ್ಕೋಬನಹಳ್ಳಿಯಲ್ಲಿ ಮೇ 11ರಂದು ಗ್ರಾಮದೇವತೆ ಕೆಂಚೋಬಳೇಶ್ವರಸ್ವಾಮಿ ದೇವಸ್ಥಾನ ಉದ್ಘಾಟನೆ ನಡೆಯಲಿದೆ.</p>.<p>ಕಾರ್ಯಕ್ರಮದ ಅಂಗವಾಗಿ ಸ್ವಾಮಿಯ ಉತ್ಸವಮೂರ್ತಿಗಳನ್ನು ಗ್ರಾಮಸ್ಥರು ವಿಜಯನಗರ ಜಿಲ್ಲೆಯ ಹಂಪಿಯ ತುಂಗಭದ್ರಾ ನದಿ ತೀರಕ್ಕೆ ಗಂಗಾಪೂಜೆಗೆ ಕರೆದೊಯ್ಯಲಾಗಿತ್ತು.</p>.<p>ಶುಕ್ರವಾರ ದೇವರ ಗ್ರಾಮಪ್ರವೇಶವಾಗಿದ್ದು, ಕುಂಭಮೇಳ, ಕಳಸ ಮೆರವಣಿಗೆ, ವಿವಿಧ ವಾದ್ಯಗಳ ಸಮ್ಮುಖದಲ್ಲಿ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ದೇವಸ್ಥಾನ ಪ್ರವೇಶ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.</p>.<p>ಶನಿವಾರ ಗಣಪತಿ, ಉಮಾಮಹೇಶ್ವರಿ, ಲಕ್ಷ್ಮೀ ನಾರಾಯಣ, ನವಗ್ರಹ, ಅಷ್ಟಲಕ್ಷ್ಮೀ, ರುದ್ರಾಭಿಷೇಕ, ಮಹಾ ಮೃತ್ಯುಂಜಯ ಹೋಮ ಆಯೋಜಿಸಲಾಗಿದೆ. ಮೇ 11ರಂದು ಬೆಳಿಗ್ಗೆ ಹೋಮ, ಕಳಶಾರೋಹಣ ನಡೆಯಲಿದೆ.</p>.<p>ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ, ಸಿದ್ದಯ್ಯನಕೋಟೆ ಬಸವಲಿಂಗ ಸ್ವಾಮೀಜಿ, ಬೋರೇಶ್ ಗುರೂಜಿ ಆಶ್ರಮದ ಶಿವಮೂರ್ತಿ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>