‘ಕಾದಂಬರಿ ಕರತಲ ರಂಗಭೂಮಿ ಎಂದು ನಮ್ಮ ಸಾಹಿತ್ಯ ಮೀಮಾಂಸೆಯಲ್ಲಿ ಹೆಸರು ಕೊಟ್ಟಿದ್ದಾರೆ. ಮಹಾಕಾವ್ಯಗಳು ಹಿಂದೆ ಯಾವ ಸ್ಥಾನ ಆಕ್ರಮಿಸಿಕೊಂಡಿದ್ದವೊ ಅದೇ ಸ್ಥಾನವನ್ನು ಕಾದಂಬರಿ ಆಕ್ರಮಿಸಿಕೊಂಡಿವೆ. ಸಾಹಿತ್ಯ ಪ್ರಕಾರಗಳಲ್ಲಿ ಕಾದಂಬರಿಯಷ್ಟು ಹೆಚ್ಚು ಪ್ರಮಾಣದ ಸಾಹಿತ್ಯ ಯಾವುದೂ ಬರಲಿಲ್ಲ. ಬಹಳ ವಿಸ್ತಾರವಾಗಿ ಬಂದಿದ್ದೇ ಕಾದಂಬರಿ’ ಎಂದು ಬಣ್ಣಿಸಿದರು.
‘ಸಾಮಾಜಿಕ, ಐತಿಹಾಸಿಕ, ಮನೊ ವಿಶ್ಲೇಷಣಾತ್ಮಕ, ವೈಜ್ಞಾನಿಕ ಕಾದಂಬರಿಗಳಿವೆ. ಅದರಲ್ಲಿ ವಿವಿಧ ರೀತಿಯ ಅನ್ವೇಷಣೆಗಳು ಇನ್ನೂ ನಡೆಯುತ್ತಿವೆ. ನವ್ಯ ಕಾದಂಬರಿಗಳಲ್ಲಿ ಇವತ್ತಿಗೂ ಪೂರ್ಣ ಅರ್ಥವಾಗದ ಕಾದಂಬರಿಗಳು ಕೂಡ ಇವೆ. ಅವು ಹೊಸ ಪ್ರಯೋಗ, ಆವಿಷ್ಕಾರಗಳಾಗಿ ಕಾಣಿಸಿಕೊಳ್ಳುತ್ತಿವೆ’ ಎಂದು ಹೇಳಿದರು.