<p><strong>ಚಿಕ್ಕಜಾಜೂರು</strong>: ರೈತರು ವರ್ಷದ ಸಣ್ಣ ಪುಟ್ಟ ಖರ್ಚುಗಳನ್ನು ಸರಿದೂಗಿಸಲು ಕೃಷಿಯಲ್ಲಿ ಹೊಸ ಪ್ರಯೋಗ ನಡೆಸುವುದು ಸಾಮಾನ್ಯ. ಇಲ್ಲೊಂದು ರೈತ ಕುಟುಂಬ ಕಳೆದ 7 ವರ್ಷಗಳಿಂದ ಜಮೀನಿನ ಸ್ವಲ್ಪ ಭಾಗವನ್ನು ತರಕಾರಿ ಬೆಳೆಗೆ ಮೀಸಲಿಟ್ಟು ವರ್ಷದಲ್ಲಿ ಎರಡು–ಮೂರು ಬೆಳೆ ಬೆಳೆದು, ಆರ್ಥಿಕ ಸ್ಥಿತಿಯನ್ನು ಸರಿದೂಗಿಸುತ್ತಿದ್ದಾರೆ.</p>.<p>ಸಮೀಪದ ಅಯ್ಯನಹಳ್ಳಿ ಗ್ರಾಮದ ರೈತ ಮಲ್ಲೇಶ ನಾಯ್ಕ ಹಾಗೂ ಮಕ್ಕಳಾದ ಸುನಿಲ್–ಅನಿಲ್ ಇಂಥ ಪ್ರಯೋಗ ಮಾಡಿದವರು. ತಮ್ಮ ಮೂರೂವರೆ ಎಕರೆ ಭೂಮಿಯಲ್ಲಿ 2 ಎಕರೆ ಭೂಮಿಯನ್ನು ನಾಲ್ಕು ಭಾಗವಾಗಿ ಮಾಡಿಕೊಂಡು ಒಂದೊಂದು ಭಾಗದಲ್ಲಿ ಒಂದೊಂದು ಬಗೆಯ ತರಕಾರಿ ಬೆಳೆಸುತ್ತಾರೆ. ಮಳೆಗಾಲ ಹಾಗೂ ಬೇಸಿಗೆಯಲ್ಲಿ ಟೊಮೊಟೊ, ಬದನೆ, ಮೆಣಸಿನಕಾಯಿ ಬೆಳೆಯುತ್ತಾರೆ.</p>.<p>ಅಕ್ಟೋಬರ್ ತಿಂಗಳಿನ ಎರಡನೇ ವಾರದಲ್ಲಿ ಮುಕ್ಕಾಲು ಎಕರೆ ಪ್ರದೇಶದಲ್ಲಿ 3 ಅಡಿ ಅಂತರದ ಸಾಲಿನಲ್ಲಿ ಒಂದುವರೆ ಅಡಿ ಅಂತರದಲ್ಲಿ ಸುಮಾರು 8000 ಟೊಮೊಟೊ ಸಸಿಗಳನ್ನು ನಾಟಿ ಮಾಡಿದ್ದಾರೆ. ಗಿಡಗಳು ಬೆಳೆದ ನಂತರ, 6–8 ಅಡಿ ಅಂತರದಲ್ಲಿ 6 ಅಡಿ ಎತ್ತರದ ಗೂಟಗಳನ್ನು ನೆಟ್ಟು, ಸಸಿಗಳನ್ನು ಗೂಟಗಳಿಗೆ ಆಧಾರವಾಗಿ ಗಿಡ ನಿಲ್ಲುವಂತೆ ಮಾಡಿಕೊಂಡು ಸೆಣಬಿನ ದಾರಗಳಿಂದ ಕಟ್ಟಿದ್ದಾರೆ. ಎರಡು ದಿನಗಳಿಗೊಮ್ಮೆ ಕೊಳವೆ ಬಾವಿಯ ನೀರು ಹಾಯಿಸಲಾಗುತ್ತಿದೆ.</p>.<p>ಕೃಷಿ ಹೊಂಡ: ಸರ್ಕಾರದಿಂದ ಸಹಾಯ ಪಡೆದು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಅದರಲ್ಲಿ ನೀರು ಸಂಗ್ರಹ ಮಾಡಿ ನೀರನ್ನು ಹಾಯಿಸಲಾಗುತ್ತಿದೆ. ಈ ಬಾರಿ ಉತ್ತಮ ಮಳೆಯಾಗಿದ್ದು, ಕೊಳವೆ ಬಾವಿಯಲ್ಲಿ ಉತ್ತಮ ನೀರು ಬರುತ್ತಿದೆ ಎನ್ನುತ್ತಾರೆ ರೈತ ಮಲ್ಲೇಶ್ ನಾಯ್ಕ.</p>.<p>ಸಸಿಗಳನ್ನು ನಾಟಿ ಮಾಡುವ ಮೊದಲು ಡಿಎಪಿ ಹಾಗೂ ಕೊಟ್ಟಿಗೆ ಗೊಬ್ಬರವನ್ನು ತಳಗೊಬ್ಬರವಾಗಿ ನೀಡಲಾಗಿದೆ. ಸಸಿಗಳನ್ನು ಮಾಯಕೊಂಡದ ಫಾರಂನಿಂದ ತರಲಾಗಿದೆ. ತಳಗೊಬ್ಬರ, ಮೇಲು ಗೊಬ್ಬರ, ಔಷಧಗಳಿಗಾಗಿ ಈವರೆಗೆ ₹ 35,000–40,000 ಖರ್ಚು ಮಾಡಲಾಗಿದೆ. ಮನೆಯಲ್ಲಿ ಎತ್ತಿನ ಬೇಸಾಯ ಇರುವುದರಿಂದ ಬೇಸಾಯದ ಕೂಲಿಯೂ ಉಳಿಯುತ್ತಿದೆ. ‘ಈಗ ವಾರದಲ್ಲಿ ಮೂರು ದಿನ ಕೊಯ್ಲು ಮಾಡುತ್ತಿದ್ದೇವೆ. ಇದಕ್ಕಾಗಿ ಐದಾರು ಜನರನ್ನು ಕೂಲಿಯಾಗಿ ತೆಗೆದುಕೊಳ್ಳುತ್ತಿದ್ದೇವೆ. ಒಬ್ಬರಿಗೆ ₹ 150 ಕೂಲಿ ಕೊಡುತ್ತಿದ್ದೇವೆ. ಜತೆಗೆ ನಾವು ಸಹ ಕೊಯ್ಲು ಮಾಡಿದ ಟೊಮೊಟೊವನ್ನು ಬಾಕ್ಸ್ಗಳಿಗೆ ವಿಂಗಡಣೆ ಮಾಡಿ ತುಂಬುತ್ತೇವೆ’ ಎನ್ನುತ್ತಾರೆ ಸುನಿಲ್.</p>.<p>ಹೀರೇಕಾಯಿ ಬಳ್ಳಿ ಹಾಳಾದ ನಂತರ ರಾಗಿಯನ್ನು ಬಿತ್ತನೆ ಮಾಡಲಾಗಿದೆ. ರಾಗಿ ಕೊಯ್ಲು ಮಾಡಿದ ನಂತರ ಮೆಣಸಿನಕಾಯಿ, ಇನ್ನೊಂದು ಭಾಗದಲ್ಲಿ ಬದನೆ ಕಾಯಿಯನ್ನು ಹಾಕಲಾಗುವುದು. ಈ ವರ್ಷ ಈ ಭಾಗದಲ್ಲಿ ಉತ್ತಮ ಮಳೆಯಾಗಿ, ಎರಡು ಮೂರು ಬಾರಿ ಹಳ್ಳಗಳು ಹರಿದಿದ್ದರಿಂದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಳೆದ ಬಾರಿಯಷ್ಟು ಇರಲಾರದು ಎಂಬ ನಂಬಿಕೆ ಇದೆ ಎನ್ನುತ್ತಾರೆ ಮಲ್ಲೇಶ ನಾಯ್ಕ.</p>.<p><strong>600 ಬಾಕ್ಸ್ ಟೊಮೊಟೊ ಕೊಯ್ಲು</strong><br />ಕೊಯ್ಲು ಮಾಡಿದ ಟೊಮೊಟೊವನ್ನು ದಾವಣಗೆರೆ ಮಾರುಕಟ್ಟೆಗೆ ನಾವೇ ತೆಗೆದುಕೊಂಡು ಹೋಗುತ್ತೇವೆ. ಆರಂಭದಲ್ಲಿ ಬಾಕ್ಸ್ ಒಂದಕ್ಕೆ ₹ 250ರಂತೆ ಮಾರಾಟ ಮಾಡಿದ್ದೆವು. ಆದರೆ, ಎರಡು ವಾರಗಳಿಂದ ಬೆಲೆ ಕುಸಿತ ಆಗಿದ್ದು, ಬಾಕ್ಸ್ ಒಂದನ್ನು ₹ 150ರಂತೆ ಮಾರಾಟ ಮಾಡುತ್ತಿದ್ದೇವೆ. ಕೆಲವು ಸಂದರ್ಭದಲ್ಲಿ ಸಮೀಪದ ಚಿಕ್ಕಜಾಜೂರು, ಹೊಳಲ್ಕೆರೆ, ಸಂತೆಬೆನ್ನೂರು ಸಂತೆಗಳಿಗೆ ಹೊಯ್ದು, ಅಲ್ಲಿನ ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತದೆ. ಬೆಲೆ ಸಿಕ್ಕಾಗ ಖುಷಿಯಾಗುತ್ತದೆ. ಆದರೆ, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಆವಕವಾದಾಗ ಬೆಲೆ ಕುಸಿತ ಆಗುತ್ತದೆ.</p>.<p>ನಾಟಿ ಮಾಡಿ 75 ದಿನಗಳಿಗೆ ಕಾಯಿ ಕೊಯ್ಲಿಗೆ ಬರುತ್ತದೆ. ಒಂದು ಬಾರಿಗೆ 75ರಿಂದ 80 ಬಾಕ್ಸ್ಗಳಷ್ಟು ಕಾಯಿಗಳು ಸಿಗುತ್ತವೆ. ಈವರೆಗೆ ಸುಮಾರು 600 ಬಾಕ್ಸ್ಗಳಷ್ಟು ಟೊಮೊಟೊ ಕೊಯ್ಲು ಮಾಡಿ ಮಾರಿದ್ದೇವೆ. ಇದರಲ್ಲಿ 250ಕ್ಕೂ ಹೆಚ್ಚು ಬಾಕ್ಸ್ಗಳನ್ನು ₹ 250ರಂತೆ ಮಾರಾಟ ಮಾಡಲಾಗಿದೆ. ಸುಮಾರು ಫೆಬ್ರುವರಿ ತಿಂಗಳವರೆಗೆ ಕೊಯ್ಲು ಮಾಡಬಹುದು. ಖರ್ಚು ಕಳೆದು ₹ 55 ಸಾವಿರದಿಂದ ₹ 60 ಸಾವಿರದವರೆಗೆ ನಿವ್ವಳ ಲಾಭ ಸಿಗುವು ನಿರೀಕ್ಷೆ ಇದೆ ಎನ್ನುತ್ತಾರೆ ಸುನಿಲ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಜಾಜೂರು</strong>: ರೈತರು ವರ್ಷದ ಸಣ್ಣ ಪುಟ್ಟ ಖರ್ಚುಗಳನ್ನು ಸರಿದೂಗಿಸಲು ಕೃಷಿಯಲ್ಲಿ ಹೊಸ ಪ್ರಯೋಗ ನಡೆಸುವುದು ಸಾಮಾನ್ಯ. ಇಲ್ಲೊಂದು ರೈತ ಕುಟುಂಬ ಕಳೆದ 7 ವರ್ಷಗಳಿಂದ ಜಮೀನಿನ ಸ್ವಲ್ಪ ಭಾಗವನ್ನು ತರಕಾರಿ ಬೆಳೆಗೆ ಮೀಸಲಿಟ್ಟು ವರ್ಷದಲ್ಲಿ ಎರಡು–ಮೂರು ಬೆಳೆ ಬೆಳೆದು, ಆರ್ಥಿಕ ಸ್ಥಿತಿಯನ್ನು ಸರಿದೂಗಿಸುತ್ತಿದ್ದಾರೆ.</p>.<p>ಸಮೀಪದ ಅಯ್ಯನಹಳ್ಳಿ ಗ್ರಾಮದ ರೈತ ಮಲ್ಲೇಶ ನಾಯ್ಕ ಹಾಗೂ ಮಕ್ಕಳಾದ ಸುನಿಲ್–ಅನಿಲ್ ಇಂಥ ಪ್ರಯೋಗ ಮಾಡಿದವರು. ತಮ್ಮ ಮೂರೂವರೆ ಎಕರೆ ಭೂಮಿಯಲ್ಲಿ 2 ಎಕರೆ ಭೂಮಿಯನ್ನು ನಾಲ್ಕು ಭಾಗವಾಗಿ ಮಾಡಿಕೊಂಡು ಒಂದೊಂದು ಭಾಗದಲ್ಲಿ ಒಂದೊಂದು ಬಗೆಯ ತರಕಾರಿ ಬೆಳೆಸುತ್ತಾರೆ. ಮಳೆಗಾಲ ಹಾಗೂ ಬೇಸಿಗೆಯಲ್ಲಿ ಟೊಮೊಟೊ, ಬದನೆ, ಮೆಣಸಿನಕಾಯಿ ಬೆಳೆಯುತ್ತಾರೆ.</p>.<p>ಅಕ್ಟೋಬರ್ ತಿಂಗಳಿನ ಎರಡನೇ ವಾರದಲ್ಲಿ ಮುಕ್ಕಾಲು ಎಕರೆ ಪ್ರದೇಶದಲ್ಲಿ 3 ಅಡಿ ಅಂತರದ ಸಾಲಿನಲ್ಲಿ ಒಂದುವರೆ ಅಡಿ ಅಂತರದಲ್ಲಿ ಸುಮಾರು 8000 ಟೊಮೊಟೊ ಸಸಿಗಳನ್ನು ನಾಟಿ ಮಾಡಿದ್ದಾರೆ. ಗಿಡಗಳು ಬೆಳೆದ ನಂತರ, 6–8 ಅಡಿ ಅಂತರದಲ್ಲಿ 6 ಅಡಿ ಎತ್ತರದ ಗೂಟಗಳನ್ನು ನೆಟ್ಟು, ಸಸಿಗಳನ್ನು ಗೂಟಗಳಿಗೆ ಆಧಾರವಾಗಿ ಗಿಡ ನಿಲ್ಲುವಂತೆ ಮಾಡಿಕೊಂಡು ಸೆಣಬಿನ ದಾರಗಳಿಂದ ಕಟ್ಟಿದ್ದಾರೆ. ಎರಡು ದಿನಗಳಿಗೊಮ್ಮೆ ಕೊಳವೆ ಬಾವಿಯ ನೀರು ಹಾಯಿಸಲಾಗುತ್ತಿದೆ.</p>.<p>ಕೃಷಿ ಹೊಂಡ: ಸರ್ಕಾರದಿಂದ ಸಹಾಯ ಪಡೆದು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಅದರಲ್ಲಿ ನೀರು ಸಂಗ್ರಹ ಮಾಡಿ ನೀರನ್ನು ಹಾಯಿಸಲಾಗುತ್ತಿದೆ. ಈ ಬಾರಿ ಉತ್ತಮ ಮಳೆಯಾಗಿದ್ದು, ಕೊಳವೆ ಬಾವಿಯಲ್ಲಿ ಉತ್ತಮ ನೀರು ಬರುತ್ತಿದೆ ಎನ್ನುತ್ತಾರೆ ರೈತ ಮಲ್ಲೇಶ್ ನಾಯ್ಕ.</p>.<p>ಸಸಿಗಳನ್ನು ನಾಟಿ ಮಾಡುವ ಮೊದಲು ಡಿಎಪಿ ಹಾಗೂ ಕೊಟ್ಟಿಗೆ ಗೊಬ್ಬರವನ್ನು ತಳಗೊಬ್ಬರವಾಗಿ ನೀಡಲಾಗಿದೆ. ಸಸಿಗಳನ್ನು ಮಾಯಕೊಂಡದ ಫಾರಂನಿಂದ ತರಲಾಗಿದೆ. ತಳಗೊಬ್ಬರ, ಮೇಲು ಗೊಬ್ಬರ, ಔಷಧಗಳಿಗಾಗಿ ಈವರೆಗೆ ₹ 35,000–40,000 ಖರ್ಚು ಮಾಡಲಾಗಿದೆ. ಮನೆಯಲ್ಲಿ ಎತ್ತಿನ ಬೇಸಾಯ ಇರುವುದರಿಂದ ಬೇಸಾಯದ ಕೂಲಿಯೂ ಉಳಿಯುತ್ತಿದೆ. ‘ಈಗ ವಾರದಲ್ಲಿ ಮೂರು ದಿನ ಕೊಯ್ಲು ಮಾಡುತ್ತಿದ್ದೇವೆ. ಇದಕ್ಕಾಗಿ ಐದಾರು ಜನರನ್ನು ಕೂಲಿಯಾಗಿ ತೆಗೆದುಕೊಳ್ಳುತ್ತಿದ್ದೇವೆ. ಒಬ್ಬರಿಗೆ ₹ 150 ಕೂಲಿ ಕೊಡುತ್ತಿದ್ದೇವೆ. ಜತೆಗೆ ನಾವು ಸಹ ಕೊಯ್ಲು ಮಾಡಿದ ಟೊಮೊಟೊವನ್ನು ಬಾಕ್ಸ್ಗಳಿಗೆ ವಿಂಗಡಣೆ ಮಾಡಿ ತುಂಬುತ್ತೇವೆ’ ಎನ್ನುತ್ತಾರೆ ಸುನಿಲ್.</p>.<p>ಹೀರೇಕಾಯಿ ಬಳ್ಳಿ ಹಾಳಾದ ನಂತರ ರಾಗಿಯನ್ನು ಬಿತ್ತನೆ ಮಾಡಲಾಗಿದೆ. ರಾಗಿ ಕೊಯ್ಲು ಮಾಡಿದ ನಂತರ ಮೆಣಸಿನಕಾಯಿ, ಇನ್ನೊಂದು ಭಾಗದಲ್ಲಿ ಬದನೆ ಕಾಯಿಯನ್ನು ಹಾಕಲಾಗುವುದು. ಈ ವರ್ಷ ಈ ಭಾಗದಲ್ಲಿ ಉತ್ತಮ ಮಳೆಯಾಗಿ, ಎರಡು ಮೂರು ಬಾರಿ ಹಳ್ಳಗಳು ಹರಿದಿದ್ದರಿಂದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಳೆದ ಬಾರಿಯಷ್ಟು ಇರಲಾರದು ಎಂಬ ನಂಬಿಕೆ ಇದೆ ಎನ್ನುತ್ತಾರೆ ಮಲ್ಲೇಶ ನಾಯ್ಕ.</p>.<p><strong>600 ಬಾಕ್ಸ್ ಟೊಮೊಟೊ ಕೊಯ್ಲು</strong><br />ಕೊಯ್ಲು ಮಾಡಿದ ಟೊಮೊಟೊವನ್ನು ದಾವಣಗೆರೆ ಮಾರುಕಟ್ಟೆಗೆ ನಾವೇ ತೆಗೆದುಕೊಂಡು ಹೋಗುತ್ತೇವೆ. ಆರಂಭದಲ್ಲಿ ಬಾಕ್ಸ್ ಒಂದಕ್ಕೆ ₹ 250ರಂತೆ ಮಾರಾಟ ಮಾಡಿದ್ದೆವು. ಆದರೆ, ಎರಡು ವಾರಗಳಿಂದ ಬೆಲೆ ಕುಸಿತ ಆಗಿದ್ದು, ಬಾಕ್ಸ್ ಒಂದನ್ನು ₹ 150ರಂತೆ ಮಾರಾಟ ಮಾಡುತ್ತಿದ್ದೇವೆ. ಕೆಲವು ಸಂದರ್ಭದಲ್ಲಿ ಸಮೀಪದ ಚಿಕ್ಕಜಾಜೂರು, ಹೊಳಲ್ಕೆರೆ, ಸಂತೆಬೆನ್ನೂರು ಸಂತೆಗಳಿಗೆ ಹೊಯ್ದು, ಅಲ್ಲಿನ ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತದೆ. ಬೆಲೆ ಸಿಕ್ಕಾಗ ಖುಷಿಯಾಗುತ್ತದೆ. ಆದರೆ, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಆವಕವಾದಾಗ ಬೆಲೆ ಕುಸಿತ ಆಗುತ್ತದೆ.</p>.<p>ನಾಟಿ ಮಾಡಿ 75 ದಿನಗಳಿಗೆ ಕಾಯಿ ಕೊಯ್ಲಿಗೆ ಬರುತ್ತದೆ. ಒಂದು ಬಾರಿಗೆ 75ರಿಂದ 80 ಬಾಕ್ಸ್ಗಳಷ್ಟು ಕಾಯಿಗಳು ಸಿಗುತ್ತವೆ. ಈವರೆಗೆ ಸುಮಾರು 600 ಬಾಕ್ಸ್ಗಳಷ್ಟು ಟೊಮೊಟೊ ಕೊಯ್ಲು ಮಾಡಿ ಮಾರಿದ್ದೇವೆ. ಇದರಲ್ಲಿ 250ಕ್ಕೂ ಹೆಚ್ಚು ಬಾಕ್ಸ್ಗಳನ್ನು ₹ 250ರಂತೆ ಮಾರಾಟ ಮಾಡಲಾಗಿದೆ. ಸುಮಾರು ಫೆಬ್ರುವರಿ ತಿಂಗಳವರೆಗೆ ಕೊಯ್ಲು ಮಾಡಬಹುದು. ಖರ್ಚು ಕಳೆದು ₹ 55 ಸಾವಿರದಿಂದ ₹ 60 ಸಾವಿರದವರೆಗೆ ನಿವ್ವಳ ಲಾಭ ಸಿಗುವು ನಿರೀಕ್ಷೆ ಇದೆ ಎನ್ನುತ್ತಾರೆ ಸುನಿಲ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>