ಮನೆಯ ಹಾಲ್ ನಿಂದ ಚಿರತೆ ಅಡುಗೆ ಮನೆಗೆ ತೆರಳುತ್ತಿದ್ದಂತೆ ಚಿದಾನಂದ ಅವರು ಹೊರಗೆ ಬಂದಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಗ್ರಾಮದ ಮಧ್ಯ ಭಾಗದಲ್ಲಿರುವ ಮನೆಗೆ ಚಿರತೆ ನುಗ್ಗಿದ್ದು ಸೋಜಿಗ ಮೂಡಿಸಿದೆ. ಗ್ರಾಮದ ಸುತ್ತ ಅಡಿಕೆ ತೋಟವಿದ್ದು, ಎರಡು ಚಿರತೆಗಳು ಈಚೆಗೆ ಕಾಣಿಸಿಕೊಂಡಿದ್ದವು ಎಂದು ಗ್ರಾಮದ ಕುಮಾರ್ ಎಂಬುವರು ಮಾಹಿತಿ ನೀಡಿದ್ದಾರೆ.