ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದಅವರು, ‘ಎರಡು ದಿನಗಳ ಹಿಂದೆ ಸಚಿವರ ಮೂಲಕ ಪಂಚಮಸಾಲಿಗಳನ್ನು 2 ‘ಎ’ಗೆ ಸೇರಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸು ಮಾಡುವ ಭರವಸೆ ನೀಡಿದ್ದ ಸಿಎಂ ಮಾತಿಗೆ ತಪ್ಪಿದ್ದಾರೆ. ಈ ಮಾತು ಕೊಡುವ ಮೊದಲು ಮೋದಿ, ಶಾ, ನಡ್ಡಾ ಅವರ ಒಪ್ಪಿಗೆ ಪಡೆದಿದ್ದರೇ? ಕೇಂದ್ರದ ನಾಯಕರನ್ನು ವೀರಶೈವ ಲಿಂಗಾಯತರ ಮುಂದೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರವನ್ನು ಸಿಎಂ ಮಾಡಿದ್ದಾರೆ. ಯಡಿಯೂರಪ್ಪ ಜಾತಿಯ ಲಿಂಗಾಯತರು ಶೇ 2ರಷ್ಟಿಲ್ಲ. ಆದರೆ, ಪಂಚಮಸಾಲಿಯವರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂಬುದನ್ನು ನೆನಪಿನಲ್ಲಿಡಬೇಕು’ ಎಂದರು.