ಸಸ್ಯಕ್ಷೇತ್ರ ಮಾಲೀಕ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ತೆಂಗಿನ ಬೆಳೆಗಾರ ಎಸ್.ಸಿ.ವೀರಭದ್ರಪ್ಪ ಶುಕ್ರವಾರ ‘ಪ್ರಜಾವಾಣಿ’ ಜತೆ ಮಾತನಾಡಿ, ‘ನಮ್ಮ ಜನರಿಗೆ ನೀರಾದಲ್ಲಿರುವ ಆರೋಗ್ಯಕರ ಅಂಶಗಳ ಬಗ್ಗೆ ಮಾಹಿತಿ ಇಲ್ಲ. ಚರ್ಮರೋಗ, ಶಕ್ತಿವರ್ಧಕ, ಅಸಿಡಿಟಿ ಸೇರಿದಂತೆ ಹತ್ತಾರು ಕಾಯಿಲೆಗಳಿಗೆ ಇದು ರಾಮಬಾಣವಾಗಿದೆ. ಮಾಹಿತಿ ಇರುವವರು ಈಗಲೂ ನಿತ್ಯ ಬಂದು ಕುಡಿಯುತ್ತಿದ್ದಾರೆ. ಬಳ್ಳಾರಿ ಕಡೆ ಜನ ಹೆಚ್ಚು ಕೊಳ್ಳುತ್ತಾರೆ’ ಎಂದು ಹೇಳಿದರು.