ಮಂಗಳವಾರ ಸಂಜೆ ಸ್ವಾಮಿ ನಾಯಿಯನ್ನು ಮನೆಯಿಂದ ಹೊರಗೆ ಕರೆತಂದಿದ್ದರು. ಮಹಾಂತೇಶ್ ಅವರ ಮನೆಯ ಸಮೀಪದಲ್ಲಿ ಮಲವಿಸರ್ಜನೆ ಮಾಡಿಸುತ್ತಿದ್ದರು. ಇದಕ್ಕೆ ಮಹಾಂತೇಶ್ ಕುಟುಂಬದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಕಮಲಮ್ಮ ಕೂಡ ಪತಿಯ ಪರವಾಗಿ ಗಲಾಟೆಯಲ್ಲಿ ತೊಡಗಿದ್ದಾರೆ. ಕುಪಿತಗೊಂಡ ಸ್ವಾಮಿ ಬಡಿಗೆಯಿಂದ ಮಹಾಂತೇಶ್ ತಲೆಗೆ ಹೊಡೆದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.