<p><strong>ಚಿತ್ರದುರ್ಗ: </strong>ಸೊಪ್ಪು, ತರಕಾರಿ ಬೆಲೆ ಏರಿಕೆಯಾಗುತ್ತಲೇ ಇದ್ದು, ಗ್ರಾಹಕರಲ್ಲಿ ತಳಮಳ ಶುರುವಾಗಿದೆ. ಅವಕ ಕಡಿಮೆ ಆಗಿರುವುದರಿಂದ ಬಹುತೇಕ ತರಕಾರಿ ಬೆಲೆ ಕೆ.ಜಿ.ಗೆ ₹80ರ ಗಡಿದಾಟಿದೆ.</p>.<p>ಇತ್ತೀಚೆಗೆ ಸುರಿದ ಭಾರಿ ಮಳೆಯ ಪರಿಣಾಮ ತರಕಾರಿ ಹಾಗೂ ಸೊಪ್ಪು ಇಳುವರಿ ಕಡಿಮೆಯಾಗಿದೆ. ಇದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ ಎಂಬುದು ತರಕಾರಿ ವ್ಯಾಪಾರಿಗಳ ವಿಶ್ಲೇಷಣೆ.</p>.<p>ಕೊತ್ತಂಬರಿ, ಮೆಂತೆ, ಪಾಲಕ್ ಸೇರಿ ಹಲವು ಸೊಪ್ಪು ಕಟ್ಟಿಗೆ ₹10ಕ್ಕೆ ಮಾರಾಟವಾಗುತ್ತಿವೆ. ಎರಡು ದಿನಗಳಿಂದ ಈಚೆಗೆ ಕೊತ್ತಂಬರಿ ಮಾತ್ರ ₹7ಕ್ಕೆ ಇಳಿಕೆಯಾಗಿದೆ. ಉಳಿದ ಸೊಪ್ಪುಗಳ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಜಮೀನಿನಲ್ಲಿದ್ದ ಸೊಪ್ಪು ಮಳೆಗೆ ಹಾಳಾಗಿರುವ ಸಾಧ್ಯತೆ ಇದೆ.</p>.<p>ಮಾರುಕಟ್ಟೆಗೆ ಭೇಟಿ ನೀಡಿದ ಗ್ರಾಹಕರು ತರಕಾರಿ ಬೆಲೆಯನ್ನು ಕಂಡು ಅಚ್ಚರಿ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ. ದುಬಾರಿ ಬೆಲೆಯ ತರಕಾರಿ ಬದಲು ಪರ್ಯಾಯಗಳತ್ತ ಗೃಹಿಣಿಯರು ಗಮನ ಹರಿಸುವಂತಾಗಿದೆ. ಬೆಂಡೆ ₹80, ಹುರಳಿಕಾಯಿ ₹80, ಬದನೆ ₹80, ಹೀರೆಕಾಯಿ ₹70, ಆಲುಗೆಡ್ಡೆ ₹50, ಕ್ಯಾರೇಟ್ ₹80, ಮೆಣಸು ₹40ಕ್ಕೆ ಬೆಲೆ ಇದೆ.</p>.<p>ಸ್ಥಳೀಯ ರೈತರು ಬೆಳೆದ ಈರುಳ್ಳಿ ಮಾತ್ರ ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ. ಮಹಾರಾಷ್ಟ್ರದಿಂದ ಬಂದಿರುವ ಈರುಳ್ಳಿ ₹50ರ ಗಡಿದಾಟಿದೆ. ಟೊಮೆಟೊ, ಸೌತೆಕಾಯಿ ಹಾಗೂ ದೊಣ್ಣಮೆಣಸಿನಕಾಯಿ ಬೆಲೆಯಲ್ಲಿ ಭಾರಿ ವ್ಯತ್ಯಾಸವಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ: </strong>ಸೊಪ್ಪು, ತರಕಾರಿ ಬೆಲೆ ಏರಿಕೆಯಾಗುತ್ತಲೇ ಇದ್ದು, ಗ್ರಾಹಕರಲ್ಲಿ ತಳಮಳ ಶುರುವಾಗಿದೆ. ಅವಕ ಕಡಿಮೆ ಆಗಿರುವುದರಿಂದ ಬಹುತೇಕ ತರಕಾರಿ ಬೆಲೆ ಕೆ.ಜಿ.ಗೆ ₹80ರ ಗಡಿದಾಟಿದೆ.</p>.<p>ಇತ್ತೀಚೆಗೆ ಸುರಿದ ಭಾರಿ ಮಳೆಯ ಪರಿಣಾಮ ತರಕಾರಿ ಹಾಗೂ ಸೊಪ್ಪು ಇಳುವರಿ ಕಡಿಮೆಯಾಗಿದೆ. ಇದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ ಎಂಬುದು ತರಕಾರಿ ವ್ಯಾಪಾರಿಗಳ ವಿಶ್ಲೇಷಣೆ.</p>.<p>ಕೊತ್ತಂಬರಿ, ಮೆಂತೆ, ಪಾಲಕ್ ಸೇರಿ ಹಲವು ಸೊಪ್ಪು ಕಟ್ಟಿಗೆ ₹10ಕ್ಕೆ ಮಾರಾಟವಾಗುತ್ತಿವೆ. ಎರಡು ದಿನಗಳಿಂದ ಈಚೆಗೆ ಕೊತ್ತಂಬರಿ ಮಾತ್ರ ₹7ಕ್ಕೆ ಇಳಿಕೆಯಾಗಿದೆ. ಉಳಿದ ಸೊಪ್ಪುಗಳ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಜಮೀನಿನಲ್ಲಿದ್ದ ಸೊಪ್ಪು ಮಳೆಗೆ ಹಾಳಾಗಿರುವ ಸಾಧ್ಯತೆ ಇದೆ.</p>.<p>ಮಾರುಕಟ್ಟೆಗೆ ಭೇಟಿ ನೀಡಿದ ಗ್ರಾಹಕರು ತರಕಾರಿ ಬೆಲೆಯನ್ನು ಕಂಡು ಅಚ್ಚರಿ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ. ದುಬಾರಿ ಬೆಲೆಯ ತರಕಾರಿ ಬದಲು ಪರ್ಯಾಯಗಳತ್ತ ಗೃಹಿಣಿಯರು ಗಮನ ಹರಿಸುವಂತಾಗಿದೆ. ಬೆಂಡೆ ₹80, ಹುರಳಿಕಾಯಿ ₹80, ಬದನೆ ₹80, ಹೀರೆಕಾಯಿ ₹70, ಆಲುಗೆಡ್ಡೆ ₹50, ಕ್ಯಾರೇಟ್ ₹80, ಮೆಣಸು ₹40ಕ್ಕೆ ಬೆಲೆ ಇದೆ.</p>.<p>ಸ್ಥಳೀಯ ರೈತರು ಬೆಳೆದ ಈರುಳ್ಳಿ ಮಾತ್ರ ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ. ಮಹಾರಾಷ್ಟ್ರದಿಂದ ಬಂದಿರುವ ಈರುಳ್ಳಿ ₹50ರ ಗಡಿದಾಟಿದೆ. ಟೊಮೆಟೊ, ಸೌತೆಕಾಯಿ ಹಾಗೂ ದೊಣ್ಣಮೆಣಸಿನಕಾಯಿ ಬೆಲೆಯಲ್ಲಿ ಭಾರಿ ವ್ಯತ್ಯಾಸವಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>