<p>ಚಿತ್ರದುರ್ಗ: ಮಾನವ ದುರ್ಬುದ್ಧಿಯಿಂದ ಹಾಳಾಗುತ್ತಿದ್ದಾನೆ. ಕೆಟ್ಟ ವಿಚಾರಗಳಿಂದ ಮನುಷ್ಯ ಅಂತರ ಕಾಯ್ದುಕೊಳ್ಳಲು ಸದ್ಬುದ್ಧಿ ಬೆಳೆಸಿಕೊಳ್ಳಬೇಕು. ಇದರಿಂದ ಜೀವನದಲ್ಲಿ ಯಶಸ್ಸು ಹಾಗೂ ಸಾರ್ಥಕತೆ ಸಾಧ್ಯವಾಗುತ್ತದೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಅನುಭವ ಮಂಟಪದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ಮಂಗಳವಾರ ನಡೆದ 31ನೇ ವರ್ಷ 10ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.</p>.<p>‘ತಾಳಿ ಕಟ್ಟಿಸಿಕೊಂಡವರು ಮತ್ತು ಕಟ್ಟಿದವರು ಸಾಂಸಾರಿಕ ಜೀವನದಲ್ಲಿ ತಾಳ್ಮೆಯನ್ನು ವಹಿಸಿದಾಗ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಸಂಸಾರದ ರಥವೇರಿರುವವರು ನಿರಾತಂಕವಾಗಿ ಜೀವನ ಸಾಗಿಸಿ’ ಎಂದು ಸಲಹೆ ನೀಡಿದರು.</p>.<p>ಗದಗ ಜಿಲ್ಲೆ ಬೆಳ್ಳಟ್ಟಿಯ ಬಸವರಾಜ ಸ್ವಾಮೀಜಿ ಮಾತನಾಡಿ, ‘ಜಗತ್ತಿನ ಮೊಟ್ಟಮೊದಲ ಸಾಮೂಹಿಕ ವಿವಾಹ ಪ್ರಾರಂಭ ಆಗಿದ್ದು 12ನೇ ಶತಮಾನದಲ್ಲಿ. ಬಸವಾದಿ ಶರಣರು ಇದನ್ನು ಪ್ರಾರಂಭಿಸಿದರು. ಮಾತೃಹೃದಯದ ಶರಣರು 31ವರ್ಷಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡುತ್ತ ಬಂದಿರುವುದು ವಿಶೇಷ. ಈ ಸೇವೆಗೆ ನೊಬೆಲ್ ಪ್ರಶಸ್ತಿ ನೀಡಿದರೂ ಕಡಿಮೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಕಾರ್ಯಕ್ರಮದ ದಾಸೋಹಿಗಳಾದ ನಾಗರತ್ನಮ್ಮ ಎಸ್.ರುದ್ರಪ್ಪ, ಎಸ್.ವಿ.ನಾಗರಾಜಪ್ಪ ವೇದಿಕೆಯಲ್ಲಿದ್ದರು. ಎಂಟು ಜೋಡಿ ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದರಲ್ಲಿ ಆದಿದ್ರಾವಿಡ ಮತ್ತು ಒಕ್ಕಲಿಗ ಸಮುದಾಯದ ಜೋಡಿಯ ಅಂತರ್ಜಾತಿ ವಿವಾಹ ವಿಶೇಷವಾಗಿತ್ತು. ಜಮುರಾ ಕಲಾವಿದರು ವಚನ ಗೀತೆಗಳನ್ನು ಹಾಡಿದರು.</p>.<p>***</p>.<p>ಸರ್ಕಾರ ಕೂಡ ಸಾಮೂಹಿಕ ವಿವಾಹಕ್ಕೆ ಚಾಲನೆ ನೀಡಿತ್ತು. ಆದರೆ, ಅದು ಮಧ್ಯದಲ್ಲೆ ಸ್ಥಗಿತವಾಗಿದೆ. ಶ್ರೀಮಠವು 31ವರ್ಷಗಳಿಂದ ಪ್ರತಿ ತಿಂಗಳು ಸಾಮೂಹಿಕ ಕಲ್ಯಾಣ ನಡೆಸಿಕೊಂಡು ಬರುತ್ತಿದೆ.</p>.<p>ಶಿವಮೂರ್ತಿ ಮುರುಘಾ ಶರಣರು,ಮುರುಘಾ ಮಠ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿತ್ರದುರ್ಗ: ಮಾನವ ದುರ್ಬುದ್ಧಿಯಿಂದ ಹಾಳಾಗುತ್ತಿದ್ದಾನೆ. ಕೆಟ್ಟ ವಿಚಾರಗಳಿಂದ ಮನುಷ್ಯ ಅಂತರ ಕಾಯ್ದುಕೊಳ್ಳಲು ಸದ್ಬುದ್ಧಿ ಬೆಳೆಸಿಕೊಳ್ಳಬೇಕು. ಇದರಿಂದ ಜೀವನದಲ್ಲಿ ಯಶಸ್ಸು ಹಾಗೂ ಸಾರ್ಥಕತೆ ಸಾಧ್ಯವಾಗುತ್ತದೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಅನುಭವ ಮಂಟಪದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ಮಂಗಳವಾರ ನಡೆದ 31ನೇ ವರ್ಷ 10ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.</p>.<p>‘ತಾಳಿ ಕಟ್ಟಿಸಿಕೊಂಡವರು ಮತ್ತು ಕಟ್ಟಿದವರು ಸಾಂಸಾರಿಕ ಜೀವನದಲ್ಲಿ ತಾಳ್ಮೆಯನ್ನು ವಹಿಸಿದಾಗ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಸಂಸಾರದ ರಥವೇರಿರುವವರು ನಿರಾತಂಕವಾಗಿ ಜೀವನ ಸಾಗಿಸಿ’ ಎಂದು ಸಲಹೆ ನೀಡಿದರು.</p>.<p>ಗದಗ ಜಿಲ್ಲೆ ಬೆಳ್ಳಟ್ಟಿಯ ಬಸವರಾಜ ಸ್ವಾಮೀಜಿ ಮಾತನಾಡಿ, ‘ಜಗತ್ತಿನ ಮೊಟ್ಟಮೊದಲ ಸಾಮೂಹಿಕ ವಿವಾಹ ಪ್ರಾರಂಭ ಆಗಿದ್ದು 12ನೇ ಶತಮಾನದಲ್ಲಿ. ಬಸವಾದಿ ಶರಣರು ಇದನ್ನು ಪ್ರಾರಂಭಿಸಿದರು. ಮಾತೃಹೃದಯದ ಶರಣರು 31ವರ್ಷಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡುತ್ತ ಬಂದಿರುವುದು ವಿಶೇಷ. ಈ ಸೇವೆಗೆ ನೊಬೆಲ್ ಪ್ರಶಸ್ತಿ ನೀಡಿದರೂ ಕಡಿಮೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಕಾರ್ಯಕ್ರಮದ ದಾಸೋಹಿಗಳಾದ ನಾಗರತ್ನಮ್ಮ ಎಸ್.ರುದ್ರಪ್ಪ, ಎಸ್.ವಿ.ನಾಗರಾಜಪ್ಪ ವೇದಿಕೆಯಲ್ಲಿದ್ದರು. ಎಂಟು ಜೋಡಿ ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದರಲ್ಲಿ ಆದಿದ್ರಾವಿಡ ಮತ್ತು ಒಕ್ಕಲಿಗ ಸಮುದಾಯದ ಜೋಡಿಯ ಅಂತರ್ಜಾತಿ ವಿವಾಹ ವಿಶೇಷವಾಗಿತ್ತು. ಜಮುರಾ ಕಲಾವಿದರು ವಚನ ಗೀತೆಗಳನ್ನು ಹಾಡಿದರು.</p>.<p>***</p>.<p>ಸರ್ಕಾರ ಕೂಡ ಸಾಮೂಹಿಕ ವಿವಾಹಕ್ಕೆ ಚಾಲನೆ ನೀಡಿತ್ತು. ಆದರೆ, ಅದು ಮಧ್ಯದಲ್ಲೆ ಸ್ಥಗಿತವಾಗಿದೆ. ಶ್ರೀಮಠವು 31ವರ್ಷಗಳಿಂದ ಪ್ರತಿ ತಿಂಗಳು ಸಾಮೂಹಿಕ ಕಲ್ಯಾಣ ನಡೆಸಿಕೊಂಡು ಬರುತ್ತಿದೆ.</p>.<p>ಶಿವಮೂರ್ತಿ ಮುರುಘಾ ಶರಣರು,ಮುರುಘಾ ಮಠ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>