ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಷರ್‌ ಮಾಲೀಕನ ಮೇಲೆ ಹಲ್ಲೆ ಆರೋಪ: ಭೂವಿಜ್ಞಾನಿ ವಿರುದ್ಧ ದೂರು ದಾಖಲು

Published 12 ಫೆಬ್ರುವರಿ 2024, 15:30 IST
Last Updated 12 ಫೆಬ್ರುವರಿ 2024, 15:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೋಟೆಲ್‌ನಲ್ಲಿ ಊಟಕ್ಕೆ ಸೇರಿಕೊಂಡಿದ್ದ ವೇಳೆ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಿರಿಯ ಭೂವಿಜ್ಞಾನಿ ಮಧುಸೂದನ್‌ ವಿರುದ್ಧ ಜಿಲ್ಲಾ ಕ್ವಾರಿ ಮತ್ತು ಕ್ರಷರ್‌ ಮಾಲೀಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್‌ ಮಜೀದ್‌ ದೂರು ದಾಖಲಿಸಿದ್ದಾರೆ.

ಹಲ್ಲೆಯಲ್ಲಿ ಗಾಯಗೊಂಡಿರುವ ಮಜೀದ್‌ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಚಿತ್ರದುರ್ಗ ತಾಲ್ಲೂಕಿನ ಮಲ್ಲನಕಟ್ಟೆ ಸಮೀ‍ಪದ ಕ್ರಷರ್‌ಗೆ ಬಂದಿದ್ದ ಭೂವಿಜ್ಞಾನಿ, ಮಾಮೂಲಿ ನೀಡುವಂತೆ ಪೀಡಿಸಿದರು. ಈ ಕುರಿತು ಮಾತನಾಡಲು ಖಾಸಗಿ ಹೋಟೆಲ್‌ನಲ್ಲಿ ಫೆ.8ರಂದು ರಾತ್ರಿ ಸೇರಿದ್ದೆವು. ಕ್ರಷರ್‌ವೊಂದರಿಂದ ಪ್ರತಿ ತಿಂಗಳು ₹ 5 ಲಕ್ಷ ಮಾಮೂಲಿ ನೀಡುವಂತೆ ಒತ್ತಾಯಿಸಿದರು. ಏಕಾಏಕಿ ಹಲ್ಲೆ ನಡೆಸಿ ಮುಖಕ್ಕೆ ಗಾಯ ಮಾಡಿದರು’ ಎಂದು ನಗರ ಠಾಣೆಗೆ ನೀಡಿದ ದೂರಿನಲ್ಲಿ ಮಜೀದ್‌ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT