ಮುಕುಂದ ಅವರ ಸ್ವಗ್ರಾಮ ಪಾವಗಡ ತಾಲ್ಲೂಕಿನ ಸಿ.ಕೆ.ಪುರದಲ್ಲಿ ಎರಡು ದಿನ ನಡೆದ ಗ್ರಾಮ ವಿಕಾಸ ದೀಪ ಪೂಜೆಯಲ್ಲಿ ಭಾಗವತ್ ಪಾಲ್ಗೊಂಡಿದ್ದರು. ಚಳ್ಳಕೆರೆ ಮಾರ್ಗವಾಗಿ ಚಿತ್ರದುರ್ಗಕ್ಕೆ ಆಗಮಿಸಿದ ಅವರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ ಅವರು ಭಾಗವತ್ ಅವರನ್ನು ಭೇಟಿ ಮಾಡಿದರು.