<p><strong>ಮೊಳಕಾಲ್ಮುರು:</strong> ತಾಲ್ಲೂಕಿನ ಬಿ.ಜಿ.ಕೆರೆಯ ಬಸ್ ನಿಲ್ದಾಣದಲ್ಲಿ ವಿದ್ಯುತ್ ಕಂಬದಿಂದ ತಂತಿಗಳು ಜೋತು ಬಿದ್ದಿದ್ದು, ಯಾವ ಕ್ಷಣದಲ್ಲಾದರೂ ಅಪಾಯ ಸಂಭವಿಸುವ ಆತಂಕ ಎದುರಾಗಿದೆ.</p>.<p>ಹೆದ್ದಾರಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಈ ಕಂಬದಿಂದ ಹೈಮಾಸ್ಟ್ ದೀಪ ಹಾಗೂ ಅಂಗಡಿಗಳಿಗೆ ಸಂಪರ್ಕ ನೀಡಿದ್ದ ತಂತಿಗಳು ಕಡಿತವಾಗಿ ಜೋತು ಬಿದ್ದಿವೆ. ಇದರ ಕೆಳಗಡೆ ಕಬ್ಬಿಣ ತಗಡಿನ ಗೂಡಂಗಡಿಗಳು ಇದ್ದು ವಿದ್ಯುತ್ ಪ್ರವಹಿಸುವ ಸಾಧ್ಯತೆ ಹೆಚ್ಚಿದೆ. ಮಳೆಗಾಲವಾಗಿರುವ ಕಾರಣ ಇಲ್ಲಿ ನಿಂತು ಬಸ್ಗೆ ಕಾಯುವವರಿಗೆ ಅನಾಹುತದ ಆತಂಕ ಕಾಡುತ್ತಿದೆ.</p>.<p>‘ತಂತಿಗಳು 5 ವರ್ಷಗಳಿಂದ ಜೋತಾಡುತ್ತಿವೆ. ಹಲವು ಬಾರಿ ಬೆಸ್ಕಾಂ ಸಿಬ್ಬಂದಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ವಿದ್ಯುತ್ ಅವಘಡ ಜಾಗೃತಿ ಮಾಸಾಚರಣೆ ಜಾಥಾ ಇದೇ ಹಾದಿಯಲ್ಲಿ ಈಚೆಗೆ ಸಾಗಿತು. ಇದು ಸಿಬ್ಬಂದಿ ಕಣ್ಣಿಗೆ ಬೀಳದಿರುವುದು ವಿಪರ್ಯಾಸ’ ಎಂದು ಅಂಗಡಿ ಮಾಲೀಕರೊಬ್ಬರು ಟೀಕಿಸಿದರು.</p>.<p>‘ಸಮಸ್ಯೆ ಗಮನಕ್ಕೆ ಬಂದಿದೆ. ದುರಸ್ತಿ ಮಾಡಿಸಲು ಬೇಕಿರುವ ತಂತಿ ಸಿಗುತ್ತಿಲ್ಲ. ಗ್ರಾಮ ಪಂಚಾಯಿತಿ ಕೊಡಿಸಲ್ಲ, ನಮ್ಮ ಬಳಿಯೂ ಇಲ್ಲ. ತಂತಿ ವ್ಯವಸ್ಥೆ ಮಾಡಿಕೊಂಡು ಶೀಘ್ರ ದುರಸ್ತಿ ಮಾಡಿಸಲಾಗುವುದು’ ಎಂಬ ಹಾರಿಕೆ ಉತ್ತರವನ್ನು ಬೆಸ್ಕಾಂ ಅಧಿಕಾರಿಯೊಬ್ಬರು ಪತ್ರಿಕೆಗೆ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong> ತಾಲ್ಲೂಕಿನ ಬಿ.ಜಿ.ಕೆರೆಯ ಬಸ್ ನಿಲ್ದಾಣದಲ್ಲಿ ವಿದ್ಯುತ್ ಕಂಬದಿಂದ ತಂತಿಗಳು ಜೋತು ಬಿದ್ದಿದ್ದು, ಯಾವ ಕ್ಷಣದಲ್ಲಾದರೂ ಅಪಾಯ ಸಂಭವಿಸುವ ಆತಂಕ ಎದುರಾಗಿದೆ.</p>.<p>ಹೆದ್ದಾರಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಈ ಕಂಬದಿಂದ ಹೈಮಾಸ್ಟ್ ದೀಪ ಹಾಗೂ ಅಂಗಡಿಗಳಿಗೆ ಸಂಪರ್ಕ ನೀಡಿದ್ದ ತಂತಿಗಳು ಕಡಿತವಾಗಿ ಜೋತು ಬಿದ್ದಿವೆ. ಇದರ ಕೆಳಗಡೆ ಕಬ್ಬಿಣ ತಗಡಿನ ಗೂಡಂಗಡಿಗಳು ಇದ್ದು ವಿದ್ಯುತ್ ಪ್ರವಹಿಸುವ ಸಾಧ್ಯತೆ ಹೆಚ್ಚಿದೆ. ಮಳೆಗಾಲವಾಗಿರುವ ಕಾರಣ ಇಲ್ಲಿ ನಿಂತು ಬಸ್ಗೆ ಕಾಯುವವರಿಗೆ ಅನಾಹುತದ ಆತಂಕ ಕಾಡುತ್ತಿದೆ.</p>.<p>‘ತಂತಿಗಳು 5 ವರ್ಷಗಳಿಂದ ಜೋತಾಡುತ್ತಿವೆ. ಹಲವು ಬಾರಿ ಬೆಸ್ಕಾಂ ಸಿಬ್ಬಂದಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ವಿದ್ಯುತ್ ಅವಘಡ ಜಾಗೃತಿ ಮಾಸಾಚರಣೆ ಜಾಥಾ ಇದೇ ಹಾದಿಯಲ್ಲಿ ಈಚೆಗೆ ಸಾಗಿತು. ಇದು ಸಿಬ್ಬಂದಿ ಕಣ್ಣಿಗೆ ಬೀಳದಿರುವುದು ವಿಪರ್ಯಾಸ’ ಎಂದು ಅಂಗಡಿ ಮಾಲೀಕರೊಬ್ಬರು ಟೀಕಿಸಿದರು.</p>.<p>‘ಸಮಸ್ಯೆ ಗಮನಕ್ಕೆ ಬಂದಿದೆ. ದುರಸ್ತಿ ಮಾಡಿಸಲು ಬೇಕಿರುವ ತಂತಿ ಸಿಗುತ್ತಿಲ್ಲ. ಗ್ರಾಮ ಪಂಚಾಯಿತಿ ಕೊಡಿಸಲ್ಲ, ನಮ್ಮ ಬಳಿಯೂ ಇಲ್ಲ. ತಂತಿ ವ್ಯವಸ್ಥೆ ಮಾಡಿಕೊಂಡು ಶೀಘ್ರ ದುರಸ್ತಿ ಮಾಡಿಸಲಾಗುವುದು’ ಎಂಬ ಹಾರಿಕೆ ಉತ್ತರವನ್ನು ಬೆಸ್ಕಾಂ ಅಧಿಕಾರಿಯೊಬ್ಬರು ಪತ್ರಿಕೆಗೆ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>