‘ಭಾರತೀಯ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಈ ಸಮಾಧಿ ಸ್ಥಳದ ಸಂಪರ್ಕ ರಸ್ತೆ ದುರಸ್ತಿ ಮಾಡಿಲ್ಲ. ಸ್ಥಳ ಸೂಚನಾ ಫಲಕಗಳನ್ನು ಹಾಕಿಲ್ಲ. ಸಮಾಧಿ ಸ್ಥಳದಲ್ಲಿ ಸ್ಥಳದ ವೈಶಿಷ್ಟ್ಯ, ಯಾವ ಕಾಲದ್ದು ಎಂಬ ಬಗ್ಗೆ ವಿವರ ಹಾಕಿಲ್ಲ. ಇದರಿಂದ ಬರುವ ಪ್ರವಾಸಿಗರಿಗೆ ಸ್ಥಳದ ಐತಿಹ್ಯ ದೊರೆಯುತ್ತಿಲ್ಲ. ಕಾವಲುಗಾರ ಸೇರಿದಂತೆ ಯಾವುದೇ ಸಿಬ್ಬಂದಿ ನೇಮಕ ಮಾಡದ ಕಾರಣ ದಾರಿ ಹೋಕರನ್ನು ವಿಚಾರಿಸುವ ಸ್ಥಿತಿಯಿದೆ’ ಎಂದು ಶಿಕ್ಷಕ ಓಬಣ್ಣ ಹೇಳಿದರು.