<p><strong>ಮೊಳಕಾಲ್ಮುರು:</strong> ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿರುವ ರೈತರಿಗೆ ನೀಡುವ ಕೃಷಿ ಪಂಡಿತ್ ಪ್ರಶಸ್ತಿಗೆ ಆಯ್ಕೆ ಮಾಡಲು ಕೃಷಿ ಇಲಾಖೆ ಅಧಿಕಾರಿಗಳ ತಂಡ ತಾಲ್ಲೂಕಿನ ಆಯ್ದ ರೈತರ ತೋಟಗಳಿಗೆ ಶುಕ್ರವಾರ ಭೇಟಿ ನೀಡಿತ್ತು.</p>.<p>ಪ್ರಶಸ್ತಿಗಾಗಿ ಇಲಾಖೆಯು ರೈತರಿಂದ ಆನ್ಲೈನ್ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಸೂಚಿಸಿತ್ತು. ಈ ಬಗ್ಗೆ ವಿವರ ಪಡೆಯಲು ತಂಡ ಭೇಟಿ ನೀಡಿತ್ತು. ತಾಲ್ಲೂಕಿನ ದೇವಸಮುದ್ರ, ಯರ್ಜೇನಹಳ್ಳಿ ಮತ್ತು ಸೂರಮ್ಮನಹಳ್ಳಿ ಗ್ರಾಮಗಳ ರೈತರ ತೋಟಗಳಿಗೆ ಭೇಟಿ ನೀಡಿತ್ತು.</p>.<p>‘ವರದಿಯನ್ನು ಇಲಾಖೆಗೆ ಸಲ್ಲಿಸಲಾಗುವುದು. ಇದಕ್ಕಾಗಿ ರಚಿಸಿರುವ ಜಿಲ್ಲಾಮಟ್ಟದ ಸಮಿತಿಯು ರೈತರನ್ನು ಆಯ್ಕೆ ಮಾಡಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.</p>.<p>ಕೃಷಿ ವಿಜ್ಞಾನಿ ಎಸ್. ಓಂಕಾರಪ್ಪ, ಜಂಟಿ ನಿರ್ದೇಶಕ ಮಂಜುನಾಥ್, ವಿಭಾಗೀಯ ಉಪ ನಿರ್ದೇಶಕ– 2 ಉಮೇಶ್ ನಾಯಕ್, ಸಹಾಯಕ ನಿರ್ದೇಶಕರಾದ ಎನ್.ವಿ. ಪ್ರಕಾಶ್, ಮಿಥುನ್, ಸಿಬ್ಬಂದಿ ಹೇಮಂತನಾಯಕ್, ಬೊಮ್ಮಲಿಂಗಪ್ಪ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಜಣ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong> ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿರುವ ರೈತರಿಗೆ ನೀಡುವ ಕೃಷಿ ಪಂಡಿತ್ ಪ್ರಶಸ್ತಿಗೆ ಆಯ್ಕೆ ಮಾಡಲು ಕೃಷಿ ಇಲಾಖೆ ಅಧಿಕಾರಿಗಳ ತಂಡ ತಾಲ್ಲೂಕಿನ ಆಯ್ದ ರೈತರ ತೋಟಗಳಿಗೆ ಶುಕ್ರವಾರ ಭೇಟಿ ನೀಡಿತ್ತು.</p>.<p>ಪ್ರಶಸ್ತಿಗಾಗಿ ಇಲಾಖೆಯು ರೈತರಿಂದ ಆನ್ಲೈನ್ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಸೂಚಿಸಿತ್ತು. ಈ ಬಗ್ಗೆ ವಿವರ ಪಡೆಯಲು ತಂಡ ಭೇಟಿ ನೀಡಿತ್ತು. ತಾಲ್ಲೂಕಿನ ದೇವಸಮುದ್ರ, ಯರ್ಜೇನಹಳ್ಳಿ ಮತ್ತು ಸೂರಮ್ಮನಹಳ್ಳಿ ಗ್ರಾಮಗಳ ರೈತರ ತೋಟಗಳಿಗೆ ಭೇಟಿ ನೀಡಿತ್ತು.</p>.<p>‘ವರದಿಯನ್ನು ಇಲಾಖೆಗೆ ಸಲ್ಲಿಸಲಾಗುವುದು. ಇದಕ್ಕಾಗಿ ರಚಿಸಿರುವ ಜಿಲ್ಲಾಮಟ್ಟದ ಸಮಿತಿಯು ರೈತರನ್ನು ಆಯ್ಕೆ ಮಾಡಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.</p>.<p>ಕೃಷಿ ವಿಜ್ಞಾನಿ ಎಸ್. ಓಂಕಾರಪ್ಪ, ಜಂಟಿ ನಿರ್ದೇಶಕ ಮಂಜುನಾಥ್, ವಿಭಾಗೀಯ ಉಪ ನಿರ್ದೇಶಕ– 2 ಉಮೇಶ್ ನಾಯಕ್, ಸಹಾಯಕ ನಿರ್ದೇಶಕರಾದ ಎನ್.ವಿ. ಪ್ರಕಾಶ್, ಮಿಥುನ್, ಸಿಬ್ಬಂದಿ ಹೇಮಂತನಾಯಕ್, ಬೊಮ್ಮಲಿಂಗಪ್ಪ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಜಣ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>