<p><strong>ಚಿತ್ರದುರ್ಗ: </strong>ಬಹಿರಂಗದ ಶತ್ರುಗಳೊಂದಿಗೆ ಹೋರಾಡಿ ಗೆಲುವು ಸಾಧಿಸಬಹುದು. ಆದರೆ, ಅಂತರಂಗದ ಬಹುದೊಡ್ಡ ವೈರಿ ಅಹಂಕಾರ ಮತ್ತು ಅಜ್ಞಾನದೊಂದಿಗೆ ಹೋರಾಟ ಮಾಡುವುದು ಸುಲಭವಲ್ಲ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.</p>.<p>ಮರುಘಾ ಮಠದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿರುವ 20ನೇ ದಿನದ ನೇರಪ್ರಸಾರ ಉಪನ್ಯಾಸದಲ್ಲಿ ಅವರು ಮಾತನಾಡಿದರು.</p>.<p>‘ಮಾನವನನ್ನು ಒಮ್ಮೊಮ್ಮೆ ಅಹಂಕಾರ ಆವರಿಸಿಕೊಳ್ಳುತ್ತದೆ. ಇದೊಂದು ರೀತಿಯ ವಿಷಸರ್ಪವಿದ್ದ ಹಾಗೆ. ಅಷ್ಟು ಸುಲಭವಾಗಿ ಇದನ್ನು ಬಿಡಿಸಲು ಸಾಧ್ಯವಿಲ್ಲ. ಅಜ್ಞಾನ ಆವರಿಸಿಕೊಂಡು ದುಷ್ಟತನಕ್ಕೆ ಪ್ರೇರಣೆ ನೀಡುತ್ತದೆ. ಇದು ಜೀವನದ ಸ್ವಾರಸ್ಯವನ್ನು ಹಾಳು ಮಾಡುತ್ತದೆ’ ಎಂದು ವಿವರಿಸಿದರು.</p>.<p>‘ಅಹಂಕಾರದಿಂದ ಅಂತಸತ್ವ ಬೂದಿಯಾಗುತ್ತದೆ. ವ್ಯಕ್ತಿತ್ವವನ್ನು ನಾಶಪಡಿಸುತ್ತದೆ. ಬದುಕು ಬಂಧನಕ್ಕೆ ಒಳಗಾಗುತ್ತದೆ. ಧನ ಸಂಚಾರ ಹೆಚ್ಚಾದಾಗ ಅಹಂಕಾರ ಬೆಳೆಯುವ ಸಾಧ್ಯತೆ ಇದೆ. ಅಧ್ಯಯನ, ಪರಮಾರ್ಥಯಾನ ಹಾಗೂ ಸತ್ಸಂಗದಿಂದ ಅಹಂಕಾರವನ್ನು ದೂರ ಮಾಡಬಹುದು’ ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ: </strong>ಬಹಿರಂಗದ ಶತ್ರುಗಳೊಂದಿಗೆ ಹೋರಾಡಿ ಗೆಲುವು ಸಾಧಿಸಬಹುದು. ಆದರೆ, ಅಂತರಂಗದ ಬಹುದೊಡ್ಡ ವೈರಿ ಅಹಂಕಾರ ಮತ್ತು ಅಜ್ಞಾನದೊಂದಿಗೆ ಹೋರಾಟ ಮಾಡುವುದು ಸುಲಭವಲ್ಲ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.</p>.<p>ಮರುಘಾ ಮಠದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿರುವ 20ನೇ ದಿನದ ನೇರಪ್ರಸಾರ ಉಪನ್ಯಾಸದಲ್ಲಿ ಅವರು ಮಾತನಾಡಿದರು.</p>.<p>‘ಮಾನವನನ್ನು ಒಮ್ಮೊಮ್ಮೆ ಅಹಂಕಾರ ಆವರಿಸಿಕೊಳ್ಳುತ್ತದೆ. ಇದೊಂದು ರೀತಿಯ ವಿಷಸರ್ಪವಿದ್ದ ಹಾಗೆ. ಅಷ್ಟು ಸುಲಭವಾಗಿ ಇದನ್ನು ಬಿಡಿಸಲು ಸಾಧ್ಯವಿಲ್ಲ. ಅಜ್ಞಾನ ಆವರಿಸಿಕೊಂಡು ದುಷ್ಟತನಕ್ಕೆ ಪ್ರೇರಣೆ ನೀಡುತ್ತದೆ. ಇದು ಜೀವನದ ಸ್ವಾರಸ್ಯವನ್ನು ಹಾಳು ಮಾಡುತ್ತದೆ’ ಎಂದು ವಿವರಿಸಿದರು.</p>.<p>‘ಅಹಂಕಾರದಿಂದ ಅಂತಸತ್ವ ಬೂದಿಯಾಗುತ್ತದೆ. ವ್ಯಕ್ತಿತ್ವವನ್ನು ನಾಶಪಡಿಸುತ್ತದೆ. ಬದುಕು ಬಂಧನಕ್ಕೆ ಒಳಗಾಗುತ್ತದೆ. ಧನ ಸಂಚಾರ ಹೆಚ್ಚಾದಾಗ ಅಹಂಕಾರ ಬೆಳೆಯುವ ಸಾಧ್ಯತೆ ಇದೆ. ಅಧ್ಯಯನ, ಪರಮಾರ್ಥಯಾನ ಹಾಗೂ ಸತ್ಸಂಗದಿಂದ ಅಹಂಕಾರವನ್ನು ದೂರ ಮಾಡಬಹುದು’ ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>