ಉತ್ಸವ ಮೂರ್ತಿಯನ್ನು ಹೊತ್ತ ಪಲ್ಲಕ್ಕಿ ದೇವಸ್ಥಾನದ ಬಳಿ ಬರುವ ವೇಳೆಗೆ ದೇವಸ್ಥಾನದ ಅರ್ಚಕರು, ಅಗ್ನಿಕುಂಡದ ಸುತ್ತ ಅರಿಸಿನ – ಕುಂಕುಮಗಳಿಂದ ರಂಗೋಲಿ ಬಿಡಿಸಿ, ಅಷ್ಠ ದಿಕ್ಕುಗಳಿಗೂ ಎಡೆ ಹಾಕಿ, ಕಾಯಿಗಳನ್ನು ಒಡೆದು ಮಹಾ ಮಂಗಳಾರತಿ ಮಾಡಿದರು. ನಂತರ, ಭಕ್ತರ ಹರ್ಷೋದ್ಗಾರದ ನಡುವೆ ವಿಶೇಷ ಉಡುಗೆ ಧರಿಸಿದ್ದ ಅರ್ಚಕರು ಅಗ್ನಿ ಕುಂಡವನ್ನು ಹಾಯ್ದರು.