ಜಾತ್ರೆ ರದ್ದಾಗಿರುವುದರಿಂದ ಅನ್ನ ದಾಸೋಹ ಇರುವುದಿಲ್ಲ. ಅಂಗಡಿ ತೆರೆಯಲು ಅವಕಾಶವಿಲ್ಲ. ಜಾತ್ರಾ ಸಾಮಾಗ್ರಿ ಮಾರಾಟಕ್ಕೆ ವಾಣಿಜ್ಯ ಮಳಿಗೆಗೆ ಅನುಮತಿ ನೀಡಿಲ್ಲ. ಪಟ್ಟಣದ ಸುತ್ತಲಿನ ಜಮೀನು, ಕಪಿಲೆ ಮನೆಗಳಲ್ಲಿ ಹರಕೆಯ ಪರವು ಮಾಡುವುದನ್ನು ನಿಷೇಧಿಸಿದೆ. ಭಕ್ತರಿಗೆ ನೀರು, ಶೌಚಾಲಯ ಒಳಗೊಂಡಂತೆ ಇನ್ನಿತರೆ ಮೂಲಸೌಲಭ್ಯಗಳು ಇರುವುದಿಲ್ಲ ಎಂದು ತಿಳಿಸಿದೆ.