ಒಂದು ಕೆ.ಜಿ. ಈರುಳ್ಳಿ ಬೀಜಕ್ಕೆ ₹ 2,800ನಂತೆ ಒಟ್ಟು 5 ಕೆ.ಜಿ. ತಂದು ಬಿತ್ತನೆ ಮಾಡಿದ್ದರು. ಹೆಣ್ಣಾಳು ಕೂಲಿ ಒಬ್ಬರಿಗೆ ₹ 300, ಗಂಡಾಳು ₹ 500, ಔಷಧ, ಗೊಬ್ಬರಕ್ಕೆ ₹ 30 ಸಾವಿರ ಖರ್ಚು ಮಾಡಿದ್ದಾರೆ. ಈರುಳ್ಳಿ ತುಂಬುವ ಖಾಲಿ ಚೀಲ ಒಂದಕ್ಕೆ ₹ 30. ಬೆಂಗಳೂರಿಗೆ ಸಾಗಿಸಲು ಲಾರಿ ಬಾಡಿಗೆ ಒಂದು ಚೀಲಕ್ಕೆ ₹ 80 ಇದೆ. ಈಗ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ 50 ಕೆ.ಜಿ. ತೂಕದ ಒಂದು ಚೀಲ ಈರುಳ್ಳಿಗೆ ₹ 300 ಇದೆ. 5 ಕೆ.ಜಿ. ಬೀಜ ನಾಟಿ ಮಾಡಿದರೆ ಅಂದಾಜು 300 ಚೀಲಗಳಷ್ಟು ಈರುಳ್ಳಿ ಸಿಗುತ್ತದೆ ಎಂಬ ಲೆಕ್ಕಾಚಾರ ಹಾಕಿದರೆ ಕೇವಲ ₹ 15,000 ಆದಾಯವಾಗಬಹುದು. ಹೀಗಾಗಿ ಈರುಳ್ಳಿ ಕೀಳದೇ ಹಾಗೆಯೇ ಬಿಟ್ಟಿದ್ದಾರೆ. ಗ್ರಾಮಸ್ಥರು ಮತ್ತು ಅಕ್ಕಪಕ್ಕದ ಗ್ರಾಮದವರು ಬಂದು ಕಿತ್ತುಕೊಂಡು ಹೋಗುತ್ತಿದ್ದಾರೆ. ಈ ಸ್ಥಿತಿ ಯಾವ ರೈತರಿಗೂ ಬರಬಾರದು’ ಎಂದು ತಿಮ್ಮಣ್ಣ ನೋವು ತೋಡಿಕೊಂಡರು.