ವಲಯ ಅರಣ್ಯಾಧಿಕಾರಿ ವಸಂತ ಕುಮಾರ್ ನೇತೃತ್ವದಲ್ಲಿ ತಾಲ್ಲೂಕಿನ ಕೊಳಾಳು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದು, ಐವರನ್ನು ಬಂಧಿಸಲಾಗಿದೆ. ಚಿತ್ರದುರ್ಗ ತಾಲ್ಲೂಕಿನ ಯರೇಹಳ್ಳಿಯ ಎಂ.ಬಸವರಾಜ, ಹೊಸದುರ್ಗ ತಾಲ್ಲೂಕಿನ ಗೂಳಿಹಟ್ಟಿಯ ಮಂಜುನಾಥ, ಮಾದಿಹಳ್ಳಿಯ ಗುರುಮೂರ್ತಿ, ಹೊಳಲ್ಕೆರೆ ತಾಲ್ಲೂಕಿನ ಕೊಮಾರನ ಹಳ್ಳಿಯ ಮೂಡ್ಲಪ್ಪ, ಹಿರಿಯೂರು ತಾಲ್ಲೂಕಿನ ಭೂತಯ್ಯನ ಹಟ್ಟಿಯ ದೇವರಾಜ ಬಂಧಿತ ಆರೋಪಿಗಳು.