<p><strong>ಹಿರಿಯೂರು:</strong> ತಾಲ್ಲೂಕಿನ ದಿಂಡಾವರ ಭಾಗಕ್ಕೆ ಸರ್ಕಾರಿ ಪಿಯು ಕಾಲೇಜು ಮಂಜೂರು ಮಾಡಿಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ನೀಡಿದರು.</p>.<p>ಗ್ರಾಮದಲ್ಲಿ ವಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ಎನ್ಎಸ್ಎಸ್ ವಿಶೇಷ ವಾರ್ಷಿಕ ಶಿಬಿರದಲ್ಲಿ ಶುಕ್ರವಾರ ಪಾಲ್ಗೊಂಡು ಅವರು ಮಾತನಾಡಿದರು.</p>.<p>ಕಲ್ಲುವಳ್ಳಿ ಭಾಗದ ಜನರು ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದ್ದಾರೆ. ದಿಂಡಾವರದಲ್ಲಿ ಪ್ರೌಢಶಾಲೆಯವರೆಗೆ ಮಾತ್ರ ಓದಲು ಅವಕಾಶವಿದೆ. ನಂತರದ ಓದಿಗೆ ಯಲ್ಲದಕೆರೆ, ಜವನಗೊಂಡನಹಳ್ಳಿ ಅಥವಾ ಹಿರಿಯೂರಿಗೆ ಹೋಗಬೇಕಿದೆ. ಸಾರಿಗೆ ವ್ಯವಸ್ಥೆಯ ಕಾರಣಕ್ಕೆ ಬಹಳಷ್ಟು ವಿದ್ಯಾರ್ಥಿಗಳು ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ. ಈ ಭಾಗಕ್ಕೆ ಪಿಯು ಕಾಲೇಜು ಮಂಜೂರು ಮಾಡಿಸಿದರೆ 10–12 ಹಳ್ಳಿಗಳ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.</p>.<p>‘ದಿಂಡಾವರ ಭಾಗದ 25 ಹಳ್ಳಿಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಮಲೇರಿಯಾ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಪ್ರಯುಕ್ತ ದಿಂಡಾವರ ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಿಸಬೇಕು. ಈ ಭಾಗದಲ್ಲಿ ಅಲೆಮಾರಿ ಸಮುದಾಯದವರು ಹೆಚ್ಚಿರುವ ಕಾರಣ ವಸತಿಯುತ ಕಾಲೇಜು ಮಂಜೂರು ಮಾಡಿದರೆ ಒಳಿತು’ ಎಂದು ಪ್ರಾಂಶುಪಾಲ ಆರ್. ಮಹೇಶ್ ಸಚಿವರಿಗೆ ಮನವಿ ಮಾಡಿದರು. </p>.<p>ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಮಹಾಂತೇಶ್, ಎಸ್.ಎಲ್.ಎನ್. ಮೂರ್ತಿ, ಎನ್. ಮಹೇಶ್, ಈರಲಿಂಗೇಗೌಡ, ಖಾದಿರಮೇಶ್, ಯಲ್ಲಮ್ಮ ಹನುಮಂತಪ್ಪ, ಅಶೋಕ್, ಪವಿತ್ರಕೃಷ್ಣ, ದೇವರಾಜ್, ಚಂದ್ರಗಿರಿ, ಪೃಥ್ವಿರಾಣಿ, ರಂಗಸ್ವಾಮಿ, ಪ್ರೊ.ಭರತ್, ಪ್ರೊ.ಹೇಮಲತಾ, ಪ್ರೊ.ಜನಾರ್ಧನ್, ಪ್ರೊ. ಜಗನ್ನಾಥ್, ರಾಧಿಕಾ, ನರಸಿಂಹಮೂರ್ತಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು:</strong> ತಾಲ್ಲೂಕಿನ ದಿಂಡಾವರ ಭಾಗಕ್ಕೆ ಸರ್ಕಾರಿ ಪಿಯು ಕಾಲೇಜು ಮಂಜೂರು ಮಾಡಿಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ನೀಡಿದರು.</p>.<p>ಗ್ರಾಮದಲ್ಲಿ ವಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ಎನ್ಎಸ್ಎಸ್ ವಿಶೇಷ ವಾರ್ಷಿಕ ಶಿಬಿರದಲ್ಲಿ ಶುಕ್ರವಾರ ಪಾಲ್ಗೊಂಡು ಅವರು ಮಾತನಾಡಿದರು.</p>.<p>ಕಲ್ಲುವಳ್ಳಿ ಭಾಗದ ಜನರು ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದ್ದಾರೆ. ದಿಂಡಾವರದಲ್ಲಿ ಪ್ರೌಢಶಾಲೆಯವರೆಗೆ ಮಾತ್ರ ಓದಲು ಅವಕಾಶವಿದೆ. ನಂತರದ ಓದಿಗೆ ಯಲ್ಲದಕೆರೆ, ಜವನಗೊಂಡನಹಳ್ಳಿ ಅಥವಾ ಹಿರಿಯೂರಿಗೆ ಹೋಗಬೇಕಿದೆ. ಸಾರಿಗೆ ವ್ಯವಸ್ಥೆಯ ಕಾರಣಕ್ಕೆ ಬಹಳಷ್ಟು ವಿದ್ಯಾರ್ಥಿಗಳು ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ. ಈ ಭಾಗಕ್ಕೆ ಪಿಯು ಕಾಲೇಜು ಮಂಜೂರು ಮಾಡಿಸಿದರೆ 10–12 ಹಳ್ಳಿಗಳ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.</p>.<p>‘ದಿಂಡಾವರ ಭಾಗದ 25 ಹಳ್ಳಿಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಮಲೇರಿಯಾ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಪ್ರಯುಕ್ತ ದಿಂಡಾವರ ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಿಸಬೇಕು. ಈ ಭಾಗದಲ್ಲಿ ಅಲೆಮಾರಿ ಸಮುದಾಯದವರು ಹೆಚ್ಚಿರುವ ಕಾರಣ ವಸತಿಯುತ ಕಾಲೇಜು ಮಂಜೂರು ಮಾಡಿದರೆ ಒಳಿತು’ ಎಂದು ಪ್ರಾಂಶುಪಾಲ ಆರ್. ಮಹೇಶ್ ಸಚಿವರಿಗೆ ಮನವಿ ಮಾಡಿದರು. </p>.<p>ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಮಹಾಂತೇಶ್, ಎಸ್.ಎಲ್.ಎನ್. ಮೂರ್ತಿ, ಎನ್. ಮಹೇಶ್, ಈರಲಿಂಗೇಗೌಡ, ಖಾದಿರಮೇಶ್, ಯಲ್ಲಮ್ಮ ಹನುಮಂತಪ್ಪ, ಅಶೋಕ್, ಪವಿತ್ರಕೃಷ್ಣ, ದೇವರಾಜ್, ಚಂದ್ರಗಿರಿ, ಪೃಥ್ವಿರಾಣಿ, ರಂಗಸ್ವಾಮಿ, ಪ್ರೊ.ಭರತ್, ಪ್ರೊ.ಹೇಮಲತಾ, ಪ್ರೊ.ಜನಾರ್ಧನ್, ಪ್ರೊ. ಜಗನ್ನಾಥ್, ರಾಧಿಕಾ, ನರಸಿಂಹಮೂರ್ತಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>