<p><strong>ಚಿತ್ರದುರ್ಗ: </strong>‘ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ’ ಎಂಬ ಪ್ಲೆಕಾರ್ಡ್ ಹಿಡಿದು ಬಿರುಬಿಸಿಲಿನಲ್ಲಿ ನಿಂತಿದ್ದವರ ಮೊಗ ಕೆರಳಿತ್ತು. ಸಂಜ್ಞೆಯಲ್ಲೇ ನಡೆಯುತ್ತಿದ್ದ ಸಂವಹನದಲ್ಲಿ ಆಕ್ರೋಶ ಇಣುಕುತ್ತಿತ್ತು. ಧ್ವನಿಪೆಟ್ಟಿಗೆಯಿಂದ ಹೊರಬರುತ್ತಿದ್ದ ಶಬ್ದ ಆರ್ತನಾದವಾಗಿ ಅನುರಣಿಸಿತು.</p>.<p>ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಹೋಬಳಿ ವ್ಯಾಪ್ತಿಯ ಮಹಿಳೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ವಾಕ್ ಮತ್ತು ಶ್ರವಣದೋಷವುಳ್ಳವರು ನಡೆಸಿದ ಪ್ರತಿಭಟನೆ ಸಾರ್ವಜನಿಕರ ಕಣ್ಣಾಲಿಗಳನ್ನು ತೇವಗೊಳಿಸಿತು. ಅತ್ಯಾಚಾರ ಸಂತ್ರಸ್ತೆ ವಾಕ್ ಮತ್ತು ಶ್ರವಣದೋಷ ಹೊಂದಿದ್ದರು ಎಂಬುದು ಇವರನ್ನು ಕೆರಳುವಂತೆ ಮಾಡಿತ್ತು.</p>.<p>ಸೆ.16ರಂದು ರಾತ್ರಿ ಬಸ್ ಇಳಿದು ಕಾಲ್ನಡಿಗೆಯಲ್ಲಿ ಮನೆಗೆ ಸಾಗುವಾಗ ಈ ಘಟನೆ ನಡೆದಿದೆ. 200 ಮೀಟರ್ ದೂರದ ಮನೆಗೆ ಒಂಟಿಯಾಗಿ ತೆರಳುತ್ತಿದ್ದ ಮಹಿಳೆಯ ಮೇಲೆ ಆರೋಪಿ ನಾಗರಾಜ ಅಲಿಯಾಸ್ ನಾಗೇಶ ಎರಗಿದ್ದನು. ಗಂಭೀರವಾಗಿ ಅಸ್ವಸ್ಥಗೊಂಡಿದ್ದರುವ ಮಹಿಳೆ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ವಾಕ್ ಮತ್ತು ಶ್ರವಣದೋಷವುಳ್ಳವರನ್ನು ಈ ಘಟನೆ ಘಾಸಿಗೊಳಿಸಿದೆ. ಕರ್ನಾಟಕ ರಾಜ್ಯ ಶ್ರವಣದೋಷವುಳ್ಳವರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಜಮಾಯಿಸಿದ್ದರು. ರಾಜ್ಯದ ಪ್ರತಿ ಜಿಲ್ಲೆಯಿಂದ ಬಂದಿದ್ದವರು ಒನಕೆ ಓಬವ್ವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಆರಂಭಿಸಿದರು.</p>.<p>‘ಅತ್ಯಾಚಾರ ಆರೋಪಿಯನ್ನು ಗಲ್ಲಿಗೆ ಏರಿಸಬೇಕು’, ‘ಸಂತ್ರಸ್ತ ಮಹಿಳೆಗೆ ನ್ಯಾಯ ಕೊಡಿಸಬೇಕು’ ಎಂದು ಪ್ಲೆಕಾರ್ಡ್ ಪ್ರದರ್ಶಿಸಿದರು. ಓಬವ್ವ ವೃತ್ತದಲ್ಲಿ ಜಾಥಾ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಹಾಗೂ ಆರೋಪಿ ಶಿಕ್ಷೆಯಿಂದ ಪಾರಾಗದಂತೆ ಎಚ್ಚರವಹಿಸಬೇಕು ಎಂದು ಮನವಿ ಮಾಡಿದರು.</p>.<p>‘ಈ ಘಟನೆ ವಾಕ್ ಮತ್ತು ಶ್ರವಣದೋಷವುಳ್ಳ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ. ನಿರ್ಭೀತಿಯಿಂದ ಸಂಚರಿಸುವ ವಾತಾವರಣ ಇಲ್ಲವೇ ಎಂಬ ಅನುಮಾನ ಹುಟ್ಟುಹಾಕಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸೂಕ್ತ ರೀತಿಯ ತನಿಖೆ ನಡೆಸಬೇಕು. ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಸಂಘದ ಅಧ್ಯಕ್ಷ ಕೆ.ಎಚ್.ಶಂಕರ್ ಆಗ್ರಹಿಸಿದರು.</p>.<p class="Subhead"><strong>ಭಾವಚಿತ್ರಕ್ಕೆ ಚಪ್ಪಲಿ ಏಟು</strong></p>.<p>ಆರೋಪಿಯ ಭಾವಚಿತ್ರವನ್ನು ನೆಲಕ್ಕೆ ಹಾಕಿದ ಪ್ರತಿಭಟನಕಾರರು, ಚಪ್ಪಲಿ ಏಟು ನೀಡಿ ಸಿಟ್ಟು ಹೊರಹಾಕಿದರು. ಈ ಭಾವಾವೇಶ ಕಂಡು ಸಾರ್ವಜನಿಕರೂ ಬೆರಗಾದರು.</p>.<p>ಕೋವಿಡ್ ಮಾರ್ಗಸೂಚಿ ಪಾಲಿಸಿ ಪ್ರತಿಭಟನೆ ನಡೆಸುತ್ತಿದ್ದವರು ಒಮ್ಮೆ ಕೆರಳಿದರು. ಆರೋಪಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಕೆಳಗೆ ಎಸೆದು ಕಾಲಲ್ಲಿ ತುಳಿದರು. ಯಾವುದೇ ಕಾರಣಕ್ಕೂ ಆರೋಪಿ ಜೈಲಿನಿಂದ ಹೊರಬರದಂತೆ ಪೊಲೀಸರು ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.</p>.<p>ಪ್ರಧಾನ ಕಾರ್ಯದರ್ಶಿ ಎಚ್.ಎಸ್.ದೇವರಾಜ್, ಡಿ.ಅವಿನಾಶ್, ಡಿ.ನವೀನಕುಮಾರ್, ಆರ್.ರಘು, ಭರತ್ ಇದ್ದರು.</p>.<p>***</p>.<p>ದುರ್ಬಲರ ಮೇಲೆ ನಡೆದ ದೌರ್ಜನ್ಯ ಖಂಡಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ನಮ್ಮ ಕೂಗು ಸರ್ಕಾರ ಹಾಗೂ ನ್ಯಾಯಾಲಯಕ್ಕೆ ತಲುಪಬೇಕು.</p>.<p><strong>ಕೆ.ಎಚ್.ಶಂಕರ್, ಅಧ್ಯಕ್ಷ<br />ಶ್ರವಣದೋಷವುಳ್ಳವರ ಕ್ಷೇಮಾಭಿವೃದ್ಧಿ ಸಂಘ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ: </strong>‘ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ’ ಎಂಬ ಪ್ಲೆಕಾರ್ಡ್ ಹಿಡಿದು ಬಿರುಬಿಸಿಲಿನಲ್ಲಿ ನಿಂತಿದ್ದವರ ಮೊಗ ಕೆರಳಿತ್ತು. ಸಂಜ್ಞೆಯಲ್ಲೇ ನಡೆಯುತ್ತಿದ್ದ ಸಂವಹನದಲ್ಲಿ ಆಕ್ರೋಶ ಇಣುಕುತ್ತಿತ್ತು. ಧ್ವನಿಪೆಟ್ಟಿಗೆಯಿಂದ ಹೊರಬರುತ್ತಿದ್ದ ಶಬ್ದ ಆರ್ತನಾದವಾಗಿ ಅನುರಣಿಸಿತು.</p>.<p>ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಹೋಬಳಿ ವ್ಯಾಪ್ತಿಯ ಮಹಿಳೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ವಾಕ್ ಮತ್ತು ಶ್ರವಣದೋಷವುಳ್ಳವರು ನಡೆಸಿದ ಪ್ರತಿಭಟನೆ ಸಾರ್ವಜನಿಕರ ಕಣ್ಣಾಲಿಗಳನ್ನು ತೇವಗೊಳಿಸಿತು. ಅತ್ಯಾಚಾರ ಸಂತ್ರಸ್ತೆ ವಾಕ್ ಮತ್ತು ಶ್ರವಣದೋಷ ಹೊಂದಿದ್ದರು ಎಂಬುದು ಇವರನ್ನು ಕೆರಳುವಂತೆ ಮಾಡಿತ್ತು.</p>.<p>ಸೆ.16ರಂದು ರಾತ್ರಿ ಬಸ್ ಇಳಿದು ಕಾಲ್ನಡಿಗೆಯಲ್ಲಿ ಮನೆಗೆ ಸಾಗುವಾಗ ಈ ಘಟನೆ ನಡೆದಿದೆ. 200 ಮೀಟರ್ ದೂರದ ಮನೆಗೆ ಒಂಟಿಯಾಗಿ ತೆರಳುತ್ತಿದ್ದ ಮಹಿಳೆಯ ಮೇಲೆ ಆರೋಪಿ ನಾಗರಾಜ ಅಲಿಯಾಸ್ ನಾಗೇಶ ಎರಗಿದ್ದನು. ಗಂಭೀರವಾಗಿ ಅಸ್ವಸ್ಥಗೊಂಡಿದ್ದರುವ ಮಹಿಳೆ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ವಾಕ್ ಮತ್ತು ಶ್ರವಣದೋಷವುಳ್ಳವರನ್ನು ಈ ಘಟನೆ ಘಾಸಿಗೊಳಿಸಿದೆ. ಕರ್ನಾಟಕ ರಾಜ್ಯ ಶ್ರವಣದೋಷವುಳ್ಳವರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಜಮಾಯಿಸಿದ್ದರು. ರಾಜ್ಯದ ಪ್ರತಿ ಜಿಲ್ಲೆಯಿಂದ ಬಂದಿದ್ದವರು ಒನಕೆ ಓಬವ್ವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಆರಂಭಿಸಿದರು.</p>.<p>‘ಅತ್ಯಾಚಾರ ಆರೋಪಿಯನ್ನು ಗಲ್ಲಿಗೆ ಏರಿಸಬೇಕು’, ‘ಸಂತ್ರಸ್ತ ಮಹಿಳೆಗೆ ನ್ಯಾಯ ಕೊಡಿಸಬೇಕು’ ಎಂದು ಪ್ಲೆಕಾರ್ಡ್ ಪ್ರದರ್ಶಿಸಿದರು. ಓಬವ್ವ ವೃತ್ತದಲ್ಲಿ ಜಾಥಾ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಹಾಗೂ ಆರೋಪಿ ಶಿಕ್ಷೆಯಿಂದ ಪಾರಾಗದಂತೆ ಎಚ್ಚರವಹಿಸಬೇಕು ಎಂದು ಮನವಿ ಮಾಡಿದರು.</p>.<p>‘ಈ ಘಟನೆ ವಾಕ್ ಮತ್ತು ಶ್ರವಣದೋಷವುಳ್ಳ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ. ನಿರ್ಭೀತಿಯಿಂದ ಸಂಚರಿಸುವ ವಾತಾವರಣ ಇಲ್ಲವೇ ಎಂಬ ಅನುಮಾನ ಹುಟ್ಟುಹಾಕಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸೂಕ್ತ ರೀತಿಯ ತನಿಖೆ ನಡೆಸಬೇಕು. ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಸಂಘದ ಅಧ್ಯಕ್ಷ ಕೆ.ಎಚ್.ಶಂಕರ್ ಆಗ್ರಹಿಸಿದರು.</p>.<p class="Subhead"><strong>ಭಾವಚಿತ್ರಕ್ಕೆ ಚಪ್ಪಲಿ ಏಟು</strong></p>.<p>ಆರೋಪಿಯ ಭಾವಚಿತ್ರವನ್ನು ನೆಲಕ್ಕೆ ಹಾಕಿದ ಪ್ರತಿಭಟನಕಾರರು, ಚಪ್ಪಲಿ ಏಟು ನೀಡಿ ಸಿಟ್ಟು ಹೊರಹಾಕಿದರು. ಈ ಭಾವಾವೇಶ ಕಂಡು ಸಾರ್ವಜನಿಕರೂ ಬೆರಗಾದರು.</p>.<p>ಕೋವಿಡ್ ಮಾರ್ಗಸೂಚಿ ಪಾಲಿಸಿ ಪ್ರತಿಭಟನೆ ನಡೆಸುತ್ತಿದ್ದವರು ಒಮ್ಮೆ ಕೆರಳಿದರು. ಆರೋಪಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಕೆಳಗೆ ಎಸೆದು ಕಾಲಲ್ಲಿ ತುಳಿದರು. ಯಾವುದೇ ಕಾರಣಕ್ಕೂ ಆರೋಪಿ ಜೈಲಿನಿಂದ ಹೊರಬರದಂತೆ ಪೊಲೀಸರು ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.</p>.<p>ಪ್ರಧಾನ ಕಾರ್ಯದರ್ಶಿ ಎಚ್.ಎಸ್.ದೇವರಾಜ್, ಡಿ.ಅವಿನಾಶ್, ಡಿ.ನವೀನಕುಮಾರ್, ಆರ್.ರಘು, ಭರತ್ ಇದ್ದರು.</p>.<p>***</p>.<p>ದುರ್ಬಲರ ಮೇಲೆ ನಡೆದ ದೌರ್ಜನ್ಯ ಖಂಡಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ನಮ್ಮ ಕೂಗು ಸರ್ಕಾರ ಹಾಗೂ ನ್ಯಾಯಾಲಯಕ್ಕೆ ತಲುಪಬೇಕು.</p>.<p><strong>ಕೆ.ಎಚ್.ಶಂಕರ್, ಅಧ್ಯಕ್ಷ<br />ಶ್ರವಣದೋಷವುಳ್ಳವರ ಕ್ಷೇಮಾಭಿವೃದ್ಧಿ ಸಂಘ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>