‘ಸಿದ್ದರಾಮಯ್ಯ ಹಾಗೂ ನಲಪಾಡ್ ತಮ್ಮ ಸ್ಥಾನದ ಘನತೆ ಮರೆತು ಚಡ್ಡಿ ಸುಡುವ ಮಾತುಗಳನ್ನಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವ ಹೇಳಿಕೆಯಲ್ಲ. ಈ ಇಬ್ಬರೂ ಸುಡಲು ಚಡ್ಡಿ ಹುಡುಕಾಟ ನಡೆಸುವುದು ಬೇಡ ಎಂದು ಕಾಂಗ್ರೆಸ್ ಕಚೇರಿಗೆ ಕಳಿಸುತ್ತಿದ್ದು, ನಾವು ಕಳಿಸಿರುವ ಚಡ್ಡಿಗಳನ್ನು ನಿಮ್ಮ ಪಕ್ಷದ ಕಚೇರಿಯಲ್ಲಿ ಸುಟ್ಟುಹಾಕಿ ಎಂದು ನಮ್ರತೆಯಿಂದ ಮನವಿ ಮಾಡುತ್ತೇವೆ. ಬೇಕಿದ್ದರೆ ಮತ್ತಷ್ಟು ಚಡ್ಡಿ ಕಳಿಸುವಂತೆ ರಾಜ್ಯದ ಹಿಂದೂಪರ ಸಂಘಟನೆಗಳಿಗೆ ಮನವಿ ಮಾಡಿಕೊಳ್ಳುತ್ತೇವೆ’ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತ ಶ್ರೀನಿವಾಸ್ ಮಸ್ಕಲ್ಹೇಳಿದರು.