ರಾತ್ರಿ 10ಕ್ಕೆ ಆರಂಭವಾದ ಮಳೆ ಬೆಳಗಿನ ಜಾವ 3 ಗಂಟೆಯವರೆಗೆ ಸುರಿದಿದೆ. ಹದಮಳೆಗೆ ತೋಟಗಳು ಸಂಪೂರ್ಣ ಹಸಿಯಾಗಿದ್ದು, ಅಡಿಕೆ ತೋಟ ಹೊಂದಿರುವ ರೈತರು ಹರ್ಷಗೊಂಡಿದ್ದಾರೆ. ಸತತ ಮಳೆಯಿಂದ ಸೋಮವಾರ ರಾತ್ರಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಎರಡು ದಿನಗಳಿಂದ ಏರ್ಟೆಲ್ ನೆಟ್ವರ್ಕ್ ಸಮಸ್ಯೆ ಉಂಟಾಗಿ ಗ್ರಾಹಕರು ಪರದಾಡಿದರು.