‘ಮಳೆ–ನೀರು–ಸಮಾಜ’ ಕುರಿತು ಉಪನ್ಯಾಸ ನೀಡಿದ ಹಾಸನದ ಸಾಮಾಜಿಕ ಹೋರಾಟಗಾರ್ತಿ ರೂಪಾ ಹಾಸನ, ‘ಪ್ರಕೃತಿ ಒಂದು ಉದಾತ್ತ ನೆಲೆಗಟ್ಟಿನಲ್ಲಿ ಸಕಲ ಜೀವಜಂತು, ಗಿಡಮರಬಳ್ಳಿಗಳನ್ನು ತನ್ನೊಳಗೆ ಒಳಗೊಂಡು ಎಲ್ಲದರ ಕ್ಷೇಮವನ್ನು ಪರಿಗಣಿಸುತ್ತ ಬಂದಿದೆ. ಆದರೆ, ಮನುಷ್ಯ ಅಭಿವೃದ್ಧಿಯ ಹೆಸರಿನಲ್ಲಿ ಕೇವಲ ಮಾನವ ಕೇಂದ್ರಿತವಾಗಿ ಯೋಚಿಸುತ್ತಿರುವುದರಿಂದ ಕಾಡು, ಗುಡ್ಡು, ಬೆಟ್ಟ, ನದಿ ಎಲ್ಲವೂ ನಿರ್ನಾಮದ ಹಂತ ತಲುಪಿದೆ. ಹವಾಮಾನ ವೈಪರಿತ್ಯದಿಂದ ಭೀಕರ ಸಮಸ್ಯೆಗಳಾಗುತ್ತಿವೆ. ಬರ–ನೆರೆ ಬಡವರ ಬದುಕನ್ನು ಕಿತ್ತು ತಿನ್ನುತ್ತಿದೆ’ ಎಂದು ವಿವರಿಸಿದರು.