ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ರೇಣುಕಾಸ್ವಾಮಿ ಹತ್ಯೆ: ಶೋಕದ ಸೌಧವಾದ ಸದ್ಧರ್ಮ ಸದನ...

ಮಗ ಬಂದೇ ಬರ್ತಾನೆ ಎಂಬ ನಂಬಿಕೆ ಇತ್ತು l ರೇಣುಕಾಸ್ವಾಮಿ ತಂದೆ– ತಾಯಿಯ ನೋವಿನ ಮಾತು
Published : 13 ಜೂನ್ 2024, 6:43 IST
Last Updated : 13 ಜೂನ್ 2024, 6:43 IST
ಫಾಲೋ ಮಾಡಿ
Comments
‘ಸದ್ಧರ್ಮ ಸದನ’ ಹೆಸರಿನ ರೇಣುಕಾಸ್ವಾಮಿ ನಿವಾಸ
‘ಸದ್ಧರ್ಮ ಸದನ’ ಹೆಸರಿನ ರೇಣುಕಾಸ್ವಾಮಿ ನಿವಾಸ
ಸಾಧು ಸಂತರಿಗೆ ಮೇಲಿನ ಅಂತಸ್ತು ಮೀಸಲು
ಸದ್ಧರ್ಮ ಸದನದ ಕೆಳ ಅಂತಸ್ತಿನಲ್ಲಿ ಕಾಶಿನಾಥಯ್ಯ ಶಿವನಗೌಡರ್‌– ರತ್ನಪ್ರಭಾ ದಂಪತಿ ವಾಸಿಸುತ್ತಿದ್ದರೆ ಮೇಲಂತಸ್ತು ಸಾಧು ಸಂತರಿಗೆ ಮೀಸಲಾಗಿದೆ. ಸ್ವಾಮೀಜಿಗಳು ಬಂದರೆ ಅವರ ವಾಸ್ತವ್ಯಕ್ಕಾಗಿ ಒಂದು ಕೊಠಡಿ ಅಡುಗೆ ಮನೆ ಪೂಜಾ ಮಂದಿರ ಭಕ್ತರಿಗೆ ದರ್ಶನ ಆಶೀರ್ವಾದ ಮಾಡಲು ಒಂದು ದೊಡ್ಡ ಹಜಾರವನ್ನು ಸಿದ್ಧಗೊಳಿಸಲಾಗಿದೆ. ‘ಸಾಧುಸಂತರ ಸೇವೆ ಮಾಡುವ ಕುಟುಂಬವದು. ಶ್ರೀಗಳು ಮನೆಗೆ ಬಂದರೆ ಕುಟುಂಬ ಸದಸ್ಯರು ಕಟ್ಟುನಿಟ್ಟಿನ ಮಡಿಯಲ್ಲಿ ಇದ್ದುಕೊಂಡು ಅಡುಗೆ ಮಾಡಿ ಬಡಿಸುತ್ತಿದ್ದರು. ಇಡೀ ಕುಟುಂಬದಲ್ಲಿ ಮುಗ್ಧತೆ ಇತ್ತು. ಭಕ್ತಿ ಮಾರ್ಗ ಬಿಟ್ಟು ಬೇರೇನೂ ತಿಳಿದವರಲ್ಲ. ಇಂತಹ ಕುಟುಂಬದಲ್ಲಿ ಹೀಗಾಗಬಾರದಾಗಿತ್ತು’ ಎಂದು ಕಾಶಿನಾಥಯ್ಯ ಶಿವನಗೌಡರ ಆತ್ಮೀಯರೊಬ್ಬರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT