ಎಸ್.ಟಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ, ‘ಇದು ಯಾರ ವಿರುದ್ಧವೂ, ಪರವೂ ನಡೆಯುತ್ತಿರುವ ಹೋರಾಟವಲ್ಲ. ಪಾದಯಾತ್ರೆಯ ಮೇಲೆ ಯಾವುದೇ ರಾಜಕೀಯ ಪಕ್ಷ ಪ್ರಭಾವ ಬೀರಿಲ್ಲ. ಕುರುಬ ಸಮುದಾಯದ ಹಿತಾಸಕ್ತಿ ಗಾಗಿ ನಡೆಯುತ್ತಿರುವ ಹೋರಾಟ’ ಎಂದರು.ಕನಕಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರು ಮಾತನಾಡಿ, ‘ಪಾದಯಾತ್ರೆ ಬೆಂಗಳೂರು ತುಲುಪಿ ಮನವಿ ಸಲ್ಲಿಸಿದ ಬಳಿಕ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಲಾಗುವುದು. ಆ ಬಳಿಕ ಹೋರಾಟ ದೆಹಲಿಗೆ ವಿಸ್ತರಣೆ ಆಗಲಿದ್ದು, ಸಂಸತ್ ಭವನದ ಎದುರು ಧರಣಿ ನಡೆಸಲಾಗುವುದು’ ಎಂದರು.